LOCAL EXPRESS :”ಹೊಸಪೇಟೆ| ರಂಗಭೂಮಿ ಬದುಕು, ಹೆಸರು ಎರಡನ್ನು ಕೊಡುತ್ತದೆ : ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಅಭಿಮತ”

By admin

” ಹೊಸಪೇಟೆ|ರಂಗಭೂಮಿ ಬದುಕು, ಹೆಸರು ಎರಡನ್ನು ಕೊಡುತ್ತದೆ : ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಅಭಿಮತ”

• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ : 

ಹೊಸಪೇಟೆ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಕಾರದಿಂದ ಹೊಸಪೇಟೆಯ ಬಹುತ್ವ ಪ್ರತಿಷ್ಠಾನ(ರಿ.) ವತಿಯಿಂದ ಸೆ.28 ವರೆಗೆ 
ಹಮ್ಮಿಕೊಂಡಿರುವ ಯುವರಂಗ -2025 ಉಚಿತ ನಾಟಕ ತರಬೇತಿ ಶಿಬಿರವು ಸಂತ ಶಿಶುನಾಳ ಶರೀಫ ರಂಗಮಂದಿರ ಭಾವೈಕ್ಯತಾ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ತರಬೇತಿ  ಶಿಬಿರಕ್ಕೆ  ಧಾರಾವಾಹಿ ನಟ,ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ. ವಿ. ನಾಗರಾಜ್ ಮೂರ್ತಿ ಅವರು ಶನಿವಾರ  ಭೇಟಿ ನೀಡಿದರು. 

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ರಂಗಭೂಮಿಯ ಪರಿಚಯ ಮತ್ತು  ಹಿನ್ನೆಲ್ಲೆ ಬಗ್ಗೆ ಜಾಗೃತಿ ಮೂಡಿಸಿ  ಜೊತೆಗೆ ಯುವಕರಲ್ಲಿ ಉತ್ಸಾಹ  ತುಂಬಿದರು. ಈ ಭಾಗದಲ್ಲಿ ರಂಗಭೂಮಿ ಮತ್ತೆ ತಲೆಯೆತ್ತಿ ನಿಂತಿರುವುದು ಬಹಳ ಸಂತೋಷದ ವಿಷಯ.  ಯುವ ಪೀಳಿಗೆ  ಈ ಕ್ಷೇತ್ರಕ್ಕೆ ಬರುತ್ತಿರುವುದು ರಂಗಭೂಮಿ ಇನ್ನಷ್ಟು ಗಟ್ಟಿಗೊಳ್ಳುತ್ತಿದೆ,  ಈ ಪ್ರದೇಶದಲ್ಲಿ ಬಹುತ್ವ ಪ್ರತಿಷ್ಠಾನವು ಉತ್ತಮ ಚಟುವಟಿಕೆಗಳು ಕೈಗೊಂಡಿದ್ದಾರೆ. ಉಚಿತ ತರಬೇತಿ ಶಿಬಿರ ಆಯೋಜಿಸಿರುವದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

  ಹಂಪಿ ಉತ್ಸವ ಈ ಭಾಗದಲ್ಲಿ  ಬಹುದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಅಂದಿನ ಕಾಲದಲ್ಲೇ ನಾವೆಲ್ಲರೂ ಹಂಪಿ ಉತ್ಸವದಲ್ಲಿ ಕೆಲಸ ಮಾಡಿದ್ದೆವು . ರಂಗಭೂಮಿಗೆ  ಇಂದಿನ ದಿನಮಾನದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟರು ತಮ್ಮ ನಟನೆಯ ಮೂಲಕ ಜನರನ್ನು ಸೆಳೆಯುವ ಕೆಲಸ ಆಗುತ್ತಿದೆ.  ಅದಕ್ಕೆ ಮೂಲ ಕಾರಣನೇ ಈ ರಂಗಭೂಮಿ. ರಂಗಭೂಮಿ ಬದುಕು ಮತ್ತು ಹೆಸರನ್ನು ಎರಡು ಕೊಡುತ್ತದೆ, ಅಷ್ಟೇ ಶ್ರದ್ಧೆಯಿಂದ ಭಕ್ತಿಯಿಂದ ರಂಗಭೂಮಿಯನ್ನು ನಿರಂತರವಾಗಿ ಕಲಿಯಬೇಕು ಮತ್ತು ಬೆಳಸಬೇಕು  ಎಂದು ಅಭಿಪ್ರಾಯಪಟ್ಟರು. 

ಈ ವೇಳೆ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ್ ದೊರೆ ,  ಭಾವೈಕ್ಯತೆ ವೇದಿಕೆಯ ಪಿ ಅಬ್ದುಲ್, ಶಿಬಿರದ ನಿರ್ದೇಶಕಿ ಡಾ.ಸಹನಾ ಪಿಂಜಾರ, ಶಿಬಿರದ ನಿರ್ದೇಶಕ  ರಿಯಾಜ್ ಸಿಹಿಮೂಗೆ, ಹಾಗೂ ಕಲಾವಿದ ಅಂಕ್ಲೇಶ ಸೇರಿದಂತೆ  ಶಿಬಿರಾರ್ಥಿಗಳು ಉಪಸ್ಥಿತರಿದ್ದರು.