🟢 LOCAL EXPRESS : ಹಂಪಿ| ಕನ್ನಡ ವಿಶ್ವವಿದ್ಯಾಲಯದಿಂದ  ಮಂಜುನಾಥ ಎಂ. ಕರಿಲಿಂಗಣ್ಣವರರಿಗೆ ಪಿಎಚ್.ಡಿ. ಪ್ರದಾನ”

By admin

LOCAL EXPRESS : “ಹಂಪಿ| ಕನ್ನಡ ವಿಶ್ವವಿದ್ಯಾಲಯದಿಂದ  ಮಂಜುನಾಥ ಎಂ. ಕರಿಲಿಂಗಣ್ಣವರರಿಗೆ ಪಿಎಚ್.ಡಿ. ಪ್ರದಾನ”

• ಸೆಕ್ಯುಲರ್‌ ವಾಯ್ಸ್‌  ನ್ಯೂಸ್‌ ಹಂಪಿ:

ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗಿಡ್ಡನಾಯಕನಾಳ ಗ್ರಾಮದ ಮಂಜುನಾಥ ಎಂ. ಕರಿಲಿಂಗಣ್ಣವರ ಅವರಿಗೆ ಪಿಎಚ್.ಡಿ. ಪದವಿ ಘೋಷಿಸಲಾಗಿದೆ.

ಡಾ. ಎಂ. ಮಲ್ಲಿಕಾರ್ಜುನ ಗೌಡ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಥಾಸಾಹಿತ್ಯ ಕುರಿತ ವಿಮರ್ಶೆಗಳ ತಾತ್ವಿಕ ಅಧ್ಯಯನ’ ವಿಷಯದ ಮೇಲೆ ಮಹಾಪ್ರಬಂಧವನ್ನು ಮಂಡಿಸಿದ್ದ ಮಂಜುನಾಥ ಎಂ. ಕರಿಲಿಂಗಣ್ಣವರ ಅವರು, ಜನವರಿ 29ರಂದು ನಡೆದ ಮೌಖಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ಮೌಖಿಕ ಪರೀಕ್ಷೆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ, ಭಾಷಾ ನಿಕಾಯದ ಡೀನ್ ಡಾ. ಮಾಧವ ಪೆರಾಜೆ, ಮೌಲ್ಯಮಾಪಕರಾದ ಧನಂಜಯ ಕುಂಬ್ಳೆ ಹಾಗೂ ಆಂತರಿಕ ವಿಷಯ ತಜ್ಞ ಸಿ. ವೆಂಕಟೇಶ್ ಉಪಸ್ಥಿತರಿದ್ದರು. ನಂತರ ಪಿಎಚ್.ಡಿ. ಪದವಿ ಘೋಷಣೆ ಮಾಡಲಾಯಿತು.

ಪಿಎಚ್.ಡಿ. ಪದವಿ ಲಭಿಸಿರುವ ಹಿನ್ನೆಲೆಯಲ್ಲಿ ಮಂಜುನಾಥ ಎಂ. ಕರಿಲಿಂಗಣ್ಣವರ ಅವರನ್ನು ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದಿಸಿದ್ದಾರೆ. ಜೊತೆಗೆ ವಿಭಾಗದ ಮುಖ್ಯಸ್ಥರು, ಮಾರ್ಗದರ್ಶಕರು ಮತ್ತು ವಿಶ್ವವಿದ್ಯಾಲಯದ ಸಂಶೋಧಕರು ಶುಭಾಶಯ ಕೋರಿದ್ದಾರೆ.