LOCAL EXPRESS : “ಕನಕಗಿರಿ|ಕರ್ನಾಟಕ ದರ್ಶನ ಪ್ರವಾಸಕ್ಕೆ ನಿರ್ಲಕ್ಷ ಆರೋಪ: ಉಪಪ್ರಾಂಶುಪಾಲ ಅಮಾನತ್ತಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕನಕಗಿರಿ:
“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡ ಮಕ್ಕಳಿಗಾಗಿ ಪ್ರವಾಸೋದ್ಯಮ ಇಲಾಖೆಯ ಆಶಾದಾಯಕ ಯೋಜನೆಯಾದ “ಕರ್ನಾಟಕ ದರ್ಶನ” ಪ್ರವಾಸ ಹಮ್ಮಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕ ಸಂಚಾಲಕ ನೀಲಕಂಠ ಬಡಿಗೇರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಹಾಗೂ ಕ್ರೈಸ್ ಶಾಲೆಗಳ ಪ.ಜಾ ಮತ್ತು ಪ.ಪಂ ಮಕ್ಕಳಿಗೆ ಉಚಿತ ಪ್ರವಾಸ ನೀಡುವ ಉದ್ದೇಶದ ಯೋಜನೆಯಿಂದ ಕೆಲವು ಶಾಲೆಗಳು ಮಕ್ಕಳನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ದೂರಿದರು.
ಅಖಂಡ ಗಂಗಾವತಿ ತಾಲೂಕದ ಕನಕಗಿರಿ, ಕಾರಟಗಿ ಪ್ರದೇಶಗಳ ಸರ್ಕಾರಿ ಶಾಲೆಗಳು, ಕ್ರೈಸ್ ಶಾಲೆ, ಕೆಆರ್ಎಸ್ ಶಾಲೆ, ಇಂದಿರಾಗಾಂಧಿ ವಸತಿ ಶಾಲೆಗಳು ಸೇರಿ ಒಟ್ಟು 12 ಶಾಲೆಗಳ 176 ಮಕ್ಕಳು (ಪ.ಜಾ–98, ಪ.ಪಂ–78) ಯೋಜನೆಯ ಸದುಪಯೋಗ ಪಡೆಯಬೇಕಾಗಿದ್ದರೂ, ಕೇವಲ 136 ಮಕ್ಕಳು ಮಾತ್ರ ಪ್ರವಾಸದಲ್ಲಿ ಭಾಗವಹಿಸಿರುವುದು ದುರಂತ ಎಂದು ಹೇಳಿದರು.
ಪ್ರಮುಖವಾಗಿ ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಜಗದೀಶ ಹಾದಿಮನಿ ಅವರು ಉದ್ದೇಶಪೂರ್ವಕವಾಗಿ ಒಂದು ಮಗುವನ್ನೂ ಪ್ರವಾಸಕ್ಕೆ ಕಳಿಸದೆ ಬಡ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಮೇಲಾಧಿಕಾರಿಗಳ ಸಭೆಗಳಿಗೆ ಹಾಜರಾಗದೆ ಆದೇಶ ಪಾಲನೆ ಮಾಡಿಲ್ಲವೆಂದೂ ದೂರಿದರು.
ಈ ವಿಷಯ ಸಂಘಟನೆಗಳು ಹಾಗೂ ಮಾಧ್ಯಮಗಳ ಗಮನಕ್ಕೆ ಬಂದ ಬಳಿಕ, ಪ್ರವಾಸಕ್ಕೆ ಆಯ್ಕೆಯಾಗಬೇಕಿದ್ದ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ, ವಿವಿಧ ಸಬೂಬುಗಳನ್ನು ಹೇಳಿಸಿ ಮಕ್ಕಳ ಮೂಲಕ ಪತ್ರಗಳನ್ನು ಬರೆಯಿಸಿಕೊಂಡು ವಿಷಯ ಮುಚ್ಚಿಹಾಕಲು ಯತ್ನ ನಡೆದಿದೆ ಎಂದು ಆರೋಪಿಸಿದರು.
ಈ ವಿಷಯ ಸಂಘಟನೆಗಳು ಹಾಗೂ ಮಾಧ್ಯಮಗಳ ಗಮನಕ್ಕೆ ಬಂದ ಬಳಿಕ, ಪ್ರವಾಸಕ್ಕೆ ಆಯ್ಕೆಯಾಗಬೇಕಿದ್ದ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ, ವಿವಿಧ ಸಬೂಬುಗಳನ್ನು ಹೇಳಿಸಿ ಮಕ್ಕಳ ಮೂಲಕ ಪತ್ರಗಳನ್ನು ಬರೆಯಿಸಿಕೊಂಡು ವಿಷಯ ಮುಚ್ಚಿಹಾಕಲು ಯತ್ನ ನಡೆದಿದೆ ಎಂದು ಆರೋಪಿಸಿದರು.

