LOCAL EXPRESS : “ಯಾದಗಿರಿ|ಸೂರತ್ – ಚೆನ್ನೈ ಎನ್ ಎಚ್ 150 ಸಿ ಕಾಮರಿಯಲ್ಲಿ ರೈತರಿಗೆ ತೊಂದರೆ : ಕಾಂಗ್ರೇಸ್‌ ಮುಖಂಡ ಡಾ.ಭೀಮಣ್ಣ ಮೇಟಿ ಆರೋಪ

By admin

“ಯಾದಗಿರಿ| ಸೂರತ್ – ಚೆನ್ನೈ ಎನ್ ಎಚ್ 150 ಸಿ ಕಾಮರಿಯಲ್ಲಿ ರೈತರಿಗೆ ತೊಂದರೆ : ಕಾಂಗ್ರೇಸ್‌ ಮುಖಂಡ ಡಾ.ಭೀಮಣ್ಣ ಮೇಟಿ ಆರೋಪ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಯಾದಗಿರಿ :

 ಭಾರತ ಮಾಲಾ ಯೋಜನೆಯಡಿ ನಡೆದಿರುವ ಸೂರತ್ – ಚೆನ್ನೈ ಎನ್ ಎಚ್ 150 ಸಿ ಕಾಮಗಾರಿ ಪೈಕಿ ಜಿಲ್ಲೆಯಲ್ಲಿ ಒಟ್ಟು 65 ಕಿಮೀ ಕೆಲಸ ನಡೆದಿದ್ದು, ಈ ಚೆನ್ನೈ ಆರ್ಥಿಕ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆಯೇ ಇಲ್ಲಿನ ರೈತರಿಗೆ ಹಲವಾರು ತೊಂದರೆಗಳು ಆಗುತ್ತಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಆರೋಪಿಸಿದ್ದಾರೆ.

ಬುಧವಾರ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಉಳ್ಳೆಸೂಗುರು ಸೇರಿದಂತೆಯೇ ವಿವಿಧ ಗ್ರಾಮಗಳ ಅನೇಕ ರೈತರ ಭೂಮಿ ಪಡೆದು ಭೂ ಪರಿಹಾರದ ಹಣ ನೀಡಿಲ್ಲವೆಂದು ಆರೋಪಿಸಿದರು.
ಕಾರಿಡಾರ್ ನ ಎರಡು ಬದಿ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಮಾಡಬೇಕೆಂದು ಒತ್ತಾಯಿಸಿದರು.

ರಸ್ತೆ ಬದಿಯಲ್ಲಿನ ರೈತರ ಜಮೀನು ಕಡಿಮೆ ದರದಲ್ಲಿ ಖರೀದಿಸಿ ಅಲ್ಲಿ ಮುರಮ್ ಹಾಕಿದ್ದರಿಂದ ದೊಡ್ಡ,ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಗುಂಡಿಗಳ ಸುತ್ತಲೂ ಪಿನ್ನಿಂಗ್ ಹಾಕಿಲ್ಲದ್ದರಿಂದ ಜನ,ಜಾನುವಾರುಗಳು ಕೈಕಾಲು ಮುರಿದುಕೊಂಡು ಪ್ರಾಣ ಕಳೆದುಕೊಳ್ಳುವ ಬೀತಿಯಲ್ಲಿದ್ದಾರೆಂದು ಮೇಟಿ ಅಲ್ಲಿನ ಸ್ಥಿತಿ ವಿವರಿಸಿದರು.

ಈ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಬೇಕಾದ ಕಚ್ಚಾ ವಸ್ತುಗಳನ್ನು ಬಂದು ಹಾಕಲು ಬಲುಭಾರದ ವಾಹನಗಳ ಇಲ್ಲಿ ಹೆಚ್ಚಾಗಿ ಸಂಚರಿಸುತ್ತಿರುವರಿಂದ ಯಾದಗಿರಿ- ಶಹಾಪುರ ಮತ್ತು ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೇ ದುರಸ್ತಿ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಜಮೀನು ಕಳೆದುಕೊಂಡಿರುವ ರೈತರ ಮಕ್ಕಳಿಗೆ ಪ್ರಮಾಣ ಪತ್ರ ನೀಡಬೇಕು. ರಸ್ತೆಗಾಗಿ ತಮ್ಮ ಅಮೂಲ್ಯ ಆಸ್ತಿಯನ್ನೆ ಕೊಟ್ಟ ಪ್ರತಿ ರೈತರ ಕುಟುಂಬದ ಒಬ್ಬರಿಗೆ ಸಿ ಅಥವಾ ಡಿ ಗ್ರೂಫ್ ಹುದ್ದೆ ನೀಡಬೇಕೆಂದು ಒತ್ತಾಯಿಸಿದ ಅವರು, ಹಾಳಾದ ಕಾಲುವೆ ಮತ್ತು ರಸ್ತೆ ನಿರ್ಮಿಸಬೇಕೆಂದರು.

ಈ ಎಲ್ಲ ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆ ಗಂಭೀರವಾಗಿ ಪರಿಗಣಿಸಿ ಈಡೆರಿಸಬೇಕು, ನಿರ್ಲಕ್ಷ್ಯ ಮಾಡಿದರೇ ರೈತರೊಂದಿಗೆ ಹೋರಾಟ ಮಾಡುವುದಾಗಿ ಡಾ.ಭೀಮಣ್ಣಾ ಮೇಟಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಇಮ್ರಾನ್ ಅಶೋಕ ವಾಟ್ಕರ್ ಇದ್ದರು