LOCAL NEWS: “ಕುಕನೂರ| ವ್ಯಸನ ತ್ಯಜಿಸಿ 64 ಜನ ಹೊಸ ಬದುಕಿಗೆ ಪಾದಾರ್ಪಣೆ : 2009ನೇ ಮದ್ಯ ಮರ್ಜನ ಶಿಬಿರ ಸಮಾರೋಪ”

By admin

“ಕುಕನೂರ| ವ್ಯಸನ ತ್ಯಜಿಸಿ 64 ಜನ ಹೊಸ ಬದುಕಿಗೆ ಪಾದಾರ್ಪಣೆ: 2009ನೇ ಮದ್ಯ ಮರ್ಜನ ಶಿಬಿರ ಸಮಾರೋಪ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರು:

ಪಟ್ಟಣದ ಅನ್ನದಾನೇಶ್ವರ ಮಠದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಹಾಗೂ ಸಂಶೋಧನಾ ಕೇಂದ್ರ, ಲಾಯಿಲ–ಬೆಳ್ತಂಗಡಿ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ನಡೆದ 2009ನೇ ಮಧ್ಯವರ್ಜನ ಶಿಬಿರ ಬುಧವಾರ ಸಮಾಪ್ತಿಗೊಂಡಿತು.

ಸಮಾರೋಪದಲ್ಲಿ ಮಾತನಾಡಿದ ಕುಕನೂರು ಅನ್ನದಾನೇಶ್ವರ ಶಾಖಾಮಠದ ಡಾ. ಮಹಾದೇವ ದೇವರು, “ತಪ್ಪು ಮಾಡುವದು ಮಾನವನ ಸ್ವಭಾವ. ಆದರೆ ಅದನ್ನು ಒಪ್ಪಿಕೊಂಡು ಗುರುಸನ್ನಿಧಿಯಲ್ಲಿ ಕ್ಷಮೆ ಯಾಚಿಸಿದಾಗ ಜೀವನ ಪಾವನವಾಗುತ್ತದೆ. ಮಧ್ಯತ್ಯಾಗ ಮಾಡಿ ಹೊಸ ಬದುಕಿಗೆ ಕಾಲಿಡುತ್ತಿರುವ ಶಿಬಿರಾರ್ಥಿಗಳು ಕುಟುಂಬದೊಂದಿಗೆ ಸಂತೋಷವಾಗಿ ಬದುಕಬೇಕು,” ಎಂದು ಆಶೀರ್ವಚನ ನೀಡಿದರು.
ಅವರು ಮುಂದುವರಿದು, “ಸರ್ಕಾರ ಮಧ್ಯದ ಗಡಿ ತೆರೆಯುತ್ತಿದ್ದರೆ, ಧರ್ಮಸ್ಥಳದ ವೀರೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ನಡೆದಿರುವ ಮಧ್ಯಮುಕ್ತ ಕ್ರಾಂತಿ ಲಕ್ಷಾಂತರ ಮನೆಗಳಿಗೆ ಬೆಳಕು ತಂದಿದೆ,” ಎಂದರು.

ಯಲಬುರ್ಗಾ ಪಟ್ಟಣದ ಶ್ರೀಧರ ಮುರುಡಿಮಠದ ಶ್ರೀ ಬಸವಲಿಂಗ ಶಿವಾಚಾರ್ಯರು ಮಾತನಾಡಿ, “ದೃಢನಿಶ್ಚಯ ಮತ್ತು ಏಕಾಗ್ರತೆ ಇದ್ದರೆ ಯಾವುದೇ ದುಷ್ಚಟವನ್ನು ಬಿಡಬಹುದು. ಮಧ್ಯದಿಂದ ದೂರವಿದ್ದಾಗ ಕುಟುಂಬ ಕಲಹವೂ ತಾನೇ ಕಡಿಮೆಯಾಗುತ್ತದೆ,” ಎಂದು ತಿಳಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬದಾಮಿ ಹೇಳಿದರು: “ವೀರೇಂದ್ರ ಹೆಗಡೆ ಅವರ ಪಾನಮುಕ್ತ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಜನರ ಬದುಕು ಮಾರ್ಪಟ್ಟಿದೆ. ಧರ್ಮಸ್ಥಳದಿಂದ ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲೂ ಶ್ಲಾಘನೀಯ ಸೇವೆ ನೀಡಲಾಗುತ್ತಿದೆ,” ಎಂದು ಪ್ರಶಂಸಿಸಿದರು.

ಶಿಬಿರದಲ್ಲಿ 64 ಮಂದಿ ಮಧ್ಯವ್ಯಾಸನದಿಂದ ಮುಕ್ತರಾಗಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಕಾರ್ಯಕ್ರಮಕ್ಕೆ ಪ್ರಕಾಶ್ ರಾವ್, ಚಂದ್ರಶೇಖರ, ನೀಲಕಂಠಪ್ಪ ನಾಗಶೆಟ್ಟಿ, ಕರಬಸಯ್ಯ ಬಿನ್ನಾಳ, ಗಣೇಶ್ ನಾಯಕ, ಶ್ರೀಶೈಲ ಸಿ., ಡಾ. ಜಂಬಣ್ಣ ಅಂಗಡಿ, ಗೀತಾ ನಂದಿಹಳ್ಳಿ, ದೇವೇಂದ್ರಪ್ಪ ಬಡಿಗೇರ, ಗುದ್ನಯ್ಯ ಬಂಡಿಮಠ, ಆನಂದ್ ಮಡಿವಾಳ, ಆರ್.ಪಿ,ರಾಜೂರ ಸೇರಿದಂತೆ  ಮೊದಲಾದವರು ಉಪಸ್ಥಿತರಿದ್ದರು.