ಒಲವಿನ ಪಿಸುಮಾತೆoಬ ಪ್ರೀತಿ

By admin

ಡಾ. ಸಾಯಿಬಣ್ಣ ಮುಡಬೂಳ, ಸಹಾಯಕ, ಪ್ರಾಧ್ಯಾಪಕರು, ಸುರಪುರ

ಜಗತ್ತಿನ ಅತ್ಯಂತ ಸುಂದರ ಭಾವಗಳಲ್ಲಿ ಪ್ರೀತಿಯು ಒಂದು. ಹೃದಯದ ಮೂಲಕ ಹಾದು ಹೋಗುವ ಅನೇಕ ಸಂವೇದ ತರಂಗಗಳಲ್ಲಿ ಪ್ರೀತಿಗೆ ಅಗ್ರಸ್ಥಾನವಿದೆ.ಪ್ರೀತಿ ಹೃದಯದ ಪರಿಭಾಷೆಯಾಗಿದೆ, ಪ್ರೀತಿ ಪರಸ್ಪರರ ನಡುವೆ ಘಟಿಸುವ ಸುಂದರ ಅನುಭುತಿಯಾಗಿದೆ. ಪ್ರೀತಿ ಅರ್ಥಪೂರ್ಣ ಭಾವನೆಗಳ ಅನುರಾಗ. ನಿಸ್ಕಲ್ಮಷ,ನೀರಪೇಕ್ಷ ಭಾವನಾ ಜೀವಿಗಳಲ್ಲಿ ಏರ್ಪಡುವ ಹೃದಯದ ನಿನಾದವಾದ ಪ್ರೀತಿ ಈ ಸೃಷ್ಟಿಯ ಅದ್ಭುತ ಅನನ್ಯ ಕೊಡುಗೆಯೆಂದರೆ ಅತಿಷಿಯೋಕ್ತಿಯಾಗಲಿಕ್ಕಿಲ್ಲ. ಕಾಲ ಕಾಲಕ್ಕೂ ಬದಲಾಗದ ಮನಸ್ಸಿನ ಭಾವನೆ ಪ್ರೀತಿಯಾಗಿದೆ. ಇಂದಿನ ಸಮಕಾಲಿನ ಸಂದರ್ಭ ಪ್ರೀತಿಯನ್ನು ಗ್ರಹಿಸುವ, ಅನುಭಾವಿಸುವ ರೀತಿ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತಿದೆ. ಪ್ರೀತಿ ಪವಿತ್ರ ಭಾವನೆಗಳ ಕಕ್ಷೆಯೊಳಗಿರುವ ದ್ರುವತಾರೆಯಾಗಿದೆ.ಪ್ರೀತಿ ಹೃದಯಾoತರದಿಂದ ಹೊರಹೋಮ್ಮವ ಒಲವಿನ ಕೊಗು. ಈ ಕೂಗು ಚೆಲುವಿನ ಚಿತ್ತಾರವನ್ನು ಬಿಡಿಸಿ ಬದುಕನ್ನು ಹಸಿರಾಗಿಸುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಪ್ರೀತಿಯನ್ನು ಎದುರುಗೊಳ್ಳುವ ಹೃದಯಗಳು ಅದರ ಸ್ವರೂಪವನ್ನು ವಿರೂಪಗೊಳಿಸುವತ್ತ ಚಿತ್ತ ಹಾಯಿಸದೆ ಅದರ ಮುನ್ನೊಟ ಮತ್ತು ಮಹತ್ವವನ್ನು ಹೆಚ್ಚಿಸಬೇಕಿದೆ. ಪ್ರೀತಿ ತಿರುಗಾಟ ಹುಡುಗಾಟವು ಅಲ್ಲ, ಪರಸ್ಪರರು ಆಕರ್ಷಣೆ ಎಂಬ ಮಾಯೆಗೆ ಒಳಗದಾಗ ದಕ್ಕಿಸಿಕೊಳ್ಳಬಹುದಾದ ಸರಕು ಅಲ್ಲ.ಪ್ರೀತಿ ಬಾಹ್ಯ ಸೌಂದರ್ಯದ ಮೂಲಕ ಮೂಡುವ ಅನುಭತಿಯಲ್ಲ. ಈ ಎಲ್ಲಾ ಬಗೆಯನ್ನು ಮೀರಿದ ಪರಸ್ಪರರ ಹೃದಯ ಸಮ್ಮಿಲನವಾಗಿದೆ. ಕನ್ನಡದ ಕಾವ್ಯ ಕಾದಂಬರಿಗಳಲ್ಲಿ ಇದರ ನವಿರಾದ ನಿರೂಪಣೆ ಹೆರಳವಾಗಿರುವದನ್ನು ಗ್ರಹಿಸಬಹುದಾಗಿದೆ. ಪ್ರೀತಿ ಜೀವನದಲ್ಲಿ ಅಪೂರ್ವ ಗಳಿಗೆಗಳನ್ನು ಸೃಷ್ಟಿಸುತ್ತದೆ, ಜೀವನ ಪ್ರೀತಿಯನ್ನು ತುಂಬುತ್ತದೆ. ಪ್ರೀತಿ ಬದುಕಿನಲ್ಲಿ ಬಹುದೊಡ್ಡ ಭರವಸೆಯನ್ನು ಹುಟ್ಟುಹಾಕುತ್ತದೆ. ಸೀಮಿತವಾದ ದೋಷಪೂರಿತ ಕಣ್ಣೋಟಗಳಿಂದ ಪ್ರೀತಿಯ ವಿಶಾಲತೆ ಕುಬ್ಜೆವಾಗುತ್ತಿದೆ. ಸಂಬಂಧಗಳ ಸುಧಾರಣಾ ಸಾಧನವಾಗಿ ಪ್ರೀತಿ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿರುವದನ್ನು ತಳ್ಳಿಹಾಕಲಾಗದು. ಪ್ರೀತಿ ಅನೇಕ ಪ್ರಕಾರಗಳನ್ನು ಒಳಗೊಂಡಿದ್ದರು ಆ ಎಲ್ಲಾ ಪ್ರಕಾರಗಳ ಉದ್ದೇಶವು ಬದುಕನ್ನು ಸುಂದರಗೊಳಿಸುವದೆ ಆಗಿದೆ. ಪ್ರೀತಿಯ ಸುತ್ತ ಇಂದು ಆವರಿಸಿರುವ ಮಿಥ್ಯೆಗಳನ್ನು ನಿಸ್ಕಲ್ಮಷ ಪ್ರೀತಿ ಮತ್ತು ಭಾವನಾ ಶ್ರೀಮಂತಿಕೆಯನ್ನು ಹೆಚ್ಚು ಹೆಚ್ಚು ನಿರೂಪಿಸುವ ಮೂಲಕ, ಈ ಪ್ರಕ್ರೀಯೆಯ ಪಾಲುದಾರರು ಅದನ್ನು ಮಿಥ್ಯೆಗೊಳಿಸಬೇಕಿದೆ. ಭಾವನೆಗಳ ಹೊರತಾಗಿ ಸುಲಭವಾಗಿ ಖರೀದಿಸಲಾರದ ಅತಿ ದೊಡ್ಡ ಮಾರುಕಟ್ಟೆಯ ಶ್ರೇಷ್ಠ ಮೌಲ್ಯವೆ ಪ್ರೀತಿ. ಹಾಗಾಗಿ ಪ್ರೀತಿಯನ್ನು ವಿಸ್ತಾರದ ನೆಲೆಗಳಲ್ಲಿ ಅರ್ಥೈಸಿಕೊಳ್ಳುವಂತ ಮನಸ್ಸುಗಳು ಇನ್ನಾದರೂ ಹೆಚ್ಚಾಗಿ, ಪ್ರೀತಿ ಎನ್ನುವ ಭಾವನೆ ಬಲಯುತವಾಗಿ ಅದು ಮತ್ತಷ್ಟು ತನ್ನ ಮೆರಗನ್ನು ಹೆಚ್ಚಿಸಿಕೊಳ್ಳುವಂತಾಗಲಿ. ಪ್ರೀತಿಗೆ ಪರ್ಯಾಯವಾದ, ಸಮನಾoತರವಾದ ಭಾವನಾ ಅಭಿವ್ಯಕ್ತಿ ಮತ್ತೊಂದಿಲ್ಲ. ಪ್ರೀತಿಯು ಸುಂದರ ಭಾವಗಳ ಉಗಮ ಸ್ಥಾನವಾಗಿ ಜೀವನ್ಮುಖಿ ಅಲೆಗಳನ್ನು ಸೃಜಿಸುತ್ತದೆ. ಸಮಕಾಲಿನ ಅನೇಕ ದ್ವಂದ್ವಗಳಿಗೆ ಪ್ರೀತಿಯ ಭಾವವು ಸಂತೈಸುವಿಕೆಯ ತಾಣವಾಗಬಹುದು. ಪ್ರೀತಿ ಇಲ್ಲದೆ ನಿಸರ್ಗದ ಯಾವ ಜೀವಿಯು ಮುಂದಡಿ ಇಡಲು ಅಸಾಧ್ಯ ಎನ್ನುವ ಕನ್ನಡದ ಖ್ಯಾತ ಕವಿ ಜಿ. ಎಸ್ ಶಿವರುದ್ರಪ್ಪನವರ ಅಭಿಮತ ಜಾಗತಿಕ ಮನ್ನಣೆ ಪಡೆದಿದೆ. ಪ್ರೀತಿಗೆ ಹೊಸ ಸಂವತ್ಸರ, ನವ ಮನ್ವoತರ ತರುವ ವಿಶಾಲತೆಯಿದೆ ಎನ್ನುವದನ್ನು ಕನ್ನಡ ಸಾಹಿತ್ಯದ ಅನೇಕ ಕವಿ ಸಾಹಿತಿಗಳು ದಾಖಲಿಸಿದ್ದಾರೆ.ಪ್ರೀತಿ ಇಲ್ಲದ ಬದುಕು ಬರಡಾಗುತ್ತದೆ, ಭಾವ ಶೂನ್ಯತೆಯೆಡೆಗೆ ವ್ಯಕ್ತಿಯನ್ನು ನೂಕುತ್ತದೆ. ಪ್ರೀತಿಯ ಭಾವ ವ್ಯಕ್ತಿ ಗಳಲ್ಲಿ ಜೀವಂತಿಕೆಯ ಗುಣಗಳನ್ನು ಹೊಂದುವಲ್ಲಿ ಸಹಕರಿಸುತ್ತದೆ. ಜಗತ್ತಿನ ಪ್ರತಿಯೊಂದು ಜೀವಗಳಲ್ಲಿ ಕರುಣೆ, ಮಮತೆ, ಸಹಾನುಭೂತಿ ಮುಡಿಸುವಲ್ಲಿ ಪ್ರೀತಿ ಪ್ರಧಾನವಾದ ಕಾರ್ಯ ನಿರ್ವಹಿಸುತ್ತದೆ. ಪ್ರೀತಿ ಜಗತ್ತನ್ನು ಸುಂದರವಾಗಿ ಕಾಣುವಂತೆ ಮಾಡುವ ಏಕೈಕ ಭಾವವಾಗಿದೆ. ಜೀವನದ ಉತ್ಸಾಹ, ಭರವಸೆ, ಉಲ್ಲಾಸಗಳಿಗೆ ಪ್ರಿತಿಯೇ ಬಹುಮುಖ್ಯವಾದ ಕಾರಣವಾಗಿದೆ. ಪ್ರೀತಿಯೆಂದರೆ ಆಕರ್ಷಣೆಯು ಅಲ್ಲ. ನೋಡಿದ ತಕ್ಷಣ ಮೂಡುವ ಒಲವಲ್ಲ. ಅದೊಂದು ಅಪೂರ್ವವಾದ ಒಲವಿನ ಪಿಸುಮಾತು. ಹೃದಯಗಳ ಶರಣಾಗತಿಯಾಗಿದೆ. ಇಂತಹ ಅದಮ್ಯ, ಅನುಪಮ ಭಾವಗಳ ಹೃದಯ ಭಾಷೆಯನ್ನು ಇಂದು ಸಂಕುಚಿತ ಭಾವನೆಗಳ ಮೂಲಕ ಪ್ರೀತಿಯನ್ನು ಗ್ರಹಿಸುವಂತ ಸಂಖ್ಯೆ ಹೆಚ್ಚಾಗುತ್ತಿದೆ. ಈ ರೀತಿಯ ವಿಪತ್ತುಗಳಿಂದ ಪ್ರೀತಿ ಹೊರಬರಬೇಕಿದೆ. ಪ್ರೀತಿಯ ಸಾಮೀಪ್ಯವನ್ನು ಬಯಸುವ ಯುವ ಸಮುದಾಯ ಅದರ ಪ್ರಾಮುಖ್ಯತೆ, ಅದರ ಪಾವಿತ್ರತೆಗೆ ಚ್ಯುತಿ ಬರದಂತೆ ಪ್ರೀತಿಯನ್ನು ಎದುರುಗೊಳ್ಳಬೇಕಿದೆ. ಆ ಮೂಲಕ ಪ್ರೀತಿ ಮತ್ತು ಪ್ರೇಮಿಗಳ ಇತಿಹಾಸಕ್ಕೆ ಮೌಲಿಕತೆಯನ್ನು ತರಬೇಕಾದ ಅಗತ್ಯತೆಯಿದೆ.

ಡಾ. ಸಾಯಿಬಣ್ಣ ಮುಡಬೂಳ, ಸಹಾಯಕ, ಪ್ರಾಧ್ಯಾಪಕರು, ಸುರಪುರ