SOCIAL MEDIA VIRAL NEWS: ಬಾಗಲಕೋಟೆ| ಪತ್ನಿಯ ಜೊತೆ ಸಲುಗೆಯಿಂದ ಮಾತಾಡಿದ್ದ ಚಾಲಕ… ರೊಚ್ಚಿಗೆದ್ದ ಮಾಲೀಕ ಕಿಡ್ನ್ಯಾಪ್ ಮಾಡಿ ಮನುಷ್ಯತ್ವ ಮರೆತು ಕ್ರೂರ ಹಲ್ಲೆ! ಮುಂದೆ ಏನಾಯ್ತು? ಇಲ್ಲಿದೆ ನೋಡಿ— ಡೀಟೇಲ್ಸ್ ಸ್ಟೋರಿ!”
“ಬಾಗಲಕೋಟೆ| ಪತ್ನಿಯ ಜೊತೆ ಸಲುಗೆಯಿಂದ ಮಾತಾಡಿದ್ದ ಚಾಲಕ: ರೊಚ್ಚಿಗೆದ್ದ ಮಾಲೀಕ ಕಿಡ್ನ್ಯಾಪ್ ಮಾಡಿ ಮನುಷ್ಯತ್ವ ಮರೆತು ಕ್ರೂರ ಹಲ್ಲೆ! ಮುಂದೆ ಏನಾಯ್ತು? ಇಲ್ಲಿದೆ ನೋಡಿ— ಡೀಟೇಲ್ಸ್ ಸ್ಟೋರಿ!”
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಮಾಲೀಕನ ಪತ್ನಿಯ ಜೊತೆ ಗೂಡ್ಸ್ ಚಾಲಕ ಸಲುಗೆಯಿಂದ ಮಾತಾಡಿದ್ದೆ ದೊಡ್ಡ ತಪ್ಪಗೆ ಪತ್ನಿ ಹಾಗೂ ಚಾಲಕನ ಸಲುಗೆ ನೋಡಿ ಕೆಂಡಾಮಂಡಲನಾದ ಮಹಿಳೆ ಗಂಡ, ತನ್ನದೇ ಮನೆಯಲ್ಲಿ ಕೆಲಸಕ್ಕಿದ್ದ ಡ್ರೈವರ್ನನ್ನೇ ಕಿಡ್ನ್ಯಾಪ್ ಮಾಡಿ ಅಮಾನವೀಯ ಕ್ರೂರವಾಗಿ ಮನಬಂದತೆ ಹಲ್ಲೆ ಮಾಡಿರುವ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿಡಿಯೋ ವೈರಲಾಗುವ ಮೂಲಕ ಸದ್ದು ಮಾಡಿ ಸುದ್ದಿ ಆಗಿದೆ.
• ಚಾಲಕನ ಕೈಗಳನ್ನ ಕಟ್ಟಿ ಹಲ್ಲೆ
ಮಾಲೀಕನ ಪತ್ನಿಯ ಜೊತೆ ಗೂಡ್ಸ್ ಚಾಲಕ ಸಲುಗೆಯಿಂದ ಮಾತಾಡಿದ್ದೆ ದೊಡ್ಡ ತಪ್ಪಾಗಿದೆ. ಪತ್ನಿ ಹಾಗೂ ಚಾಲಕನ ಸಲುಗೆ ನೋಡಿ ಕೆಂಡಾಮಂಡಲನಾದ ಮಹಿಳೆ ಗಂಡ, ತನ್ನದೇ ಮನೆಯಲ್ಲಿ ಕೆಲಸಕ್ಕಿದ್ದ ಡ್ರೈವರ್ನನ್ನೇ ಕಿಡ್ನ್ಯಾಪ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಚಾಲಕನ ಕೈಗಳನ್ನ ಕಟ್ಟಿ ಹಲ್ಲೆ ಮಾಡಿ ಕೋಲಿನಿಂದ ಕಾಲು ಬೆನ್ನಿಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ.
• ತುಳಸಿಗೇರಿ ಗುಡ್ಡಕ್ಕೆ ಕರೆದೊಯ್ದು ಚಾಲಕನ ಮೇಲೆ ಕ್ರೂರ ಹಲ್ಲೆ:
ಪ್ರಕಾಶ್ ಹೊಸಮನಿ (25) ಎಂಬ ಚಾಲಕನನ್ನು ಮಾಲೀಕ ಯಂಕಪ್ಪ ಚೂರಿ ತುಳಸಿಗೇರಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅನೇಕರು ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಲು ಅ. 3 ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದ ಬಳಿಕ ನವನಗರ ಪೊಲೀಸ್ ಠಾಣೆಯಲ್ಲಿ 10 ಜನರ ಮೇಲೆ ಕೇಸು ದಾಖಲಾಗಿದೆ.ತನಿಖೆ ಮುಂದುವರೆದಿದೆ ಮೂಲಗಳಿಂದ ಎಂದು ತಿಳಿದು ಬಂದಿದೆ.