⭐VIRAL NEWS :”ರೀಲ್ಸ್‌ನಲ್ಲಿ ನಗುವ ಈ ಯುವಕ ಯಾರು?  ಇಲ್ಲಿದೆ ನೋಡಿ! ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಹಿಂದಿನ  ರಿಯಲ್ ಸ್ಟೋರಿ!👇👇

By admin

⭐VIRAL NEWS  :“ರೀಲ್ಸ್‌ನಲ್ಲಿ ನಗುವ ಈ ಯುವಕ ಯಾರು?  ಇಲ್ಲಿದೆ ನೋಡಿ! ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಹಿಂದಿನ  ರಿಯಲ್ ಸ್ಟೋರಿ!👇👇

 

Contents
⭐VIRAL NEWS  :“ರೀಲ್ಸ್‌ನಲ್ಲಿ ನಗುವ ಈ ಯುವಕ ಯಾರು?  ಇಲ್ಲಿದೆ ನೋಡಿ! ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಹಿಂದಿನ  ರಿಯಲ್ ಸ್ಟೋರಿ!👇👇 • ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :ತೆಲಂಗಾಣ :ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ರೀಲ್ಸ್‌ಗಳಲ್ಲಿ ಕೈಯಲ್ಲಿ ಟೀ ಕಪ್ ಹಿಡಿದು ನಗುತ್ತಿರುವ ಯುವಕನ ವಿಡಿಯೋ ದೇಶಾದ್ಯಂತ ವೈರಲ್ ಆಗಿದೆ. ಈ ಯುವಕನ ಹೆಸರು ಅರುಣ್. ಇವರು ತೆಲಂಗಾಣ ರಾಜ್ಯದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ನಾಲಪು ಚಟುಪಲ್ಲಿ ಗ್ರಾಮದ ನಿವಾಸಿ.ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿರುವ ಅರುಣ್, ಸರಳ ನಗು ಮತ್ತು ಸಹಜ ವರ್ತನೆಯಿಂದಲೇ ಲಕ್ಷಾಂತರ ಜನರ ಗಮನ ಸೆಳೆದಿದ್ದಾರೆ. ಲಾರಿಯಲ್ಲಿ ಕೆಲಸ ಮಾಡುವ ವೇಳೆ ಚಾಲಕ ನೆಹರು (ಅರುಣ್ ಪ್ರೀತಿಯಿಂದ ‘ಬಾವ’ ಎಂದು ಕರೆಯುವವರು) ಚಹಾ ಕುಡಿಯುವ ಸಂದರ್ಭದ ಹಾಸ್ಯಭರಿತ ಸಂಭಾಷಣೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೇ ವಿಡಿಯೋ ವೈರಲ್ ಆಗಲು ಕಾರಣವಾಯಿತು.ಬಡ ಕುಟುಂಬ ಹಿನ್ನೆಲೆಯ ಅರುಣ್, ಆರ್ಥಿಕ ಸಮಸ್ಯೆಗಳ ಕಾರಣದಿಂದ ನಾಲ್ಕನೇ ತರಗತಿಗೇ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ಆದರೆ ನೆಹರು ಅವರ ಪ್ರೋತ್ಸಾಹದಿಂದ ಇತ್ತೀಚೆಗೆ 10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಲಾರಿ ಚಾಲನೆಯನ್ನೂ ಕಲಿಯುತ್ತಿದ್ದಾರೆ.ಒಂದೂವರೆ ತಿಂಗಳ ಅವಧಿಯಲ್ಲಿ ಈ ವಿಡಿಯೋ ಸುಮಾರು ನಾಲ್ಕು ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅರುಣ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಆಗಿದ್ದಾರೆ. ಸಾಮಾನ್ಯ ಕಾರ್ಮಿಕನೊಬ್ಬ ದೇಶಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ನಿಜಕ್ಕೂ ಪ್ರೇರಣಾದಾಯಕ ಸಂಗತಿಯಾಗಿದೆ.

 • ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :

ತೆಲಂಗಾಣ :ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ರೀಲ್ಸ್‌ಗಳಲ್ಲಿ ಕೈಯಲ್ಲಿ ಟೀ ಕಪ್ ಹಿಡಿದು ನಗುತ್ತಿರುವ ಯುವಕನ ವಿಡಿಯೋ ದೇಶಾದ್ಯಂತ ವೈರಲ್ ಆಗಿದೆ. ಈ ಯುವಕನ ಹೆಸರು ಅರುಣ್. ಇವರು ತೆಲಂಗಾಣ ರಾಜ್ಯದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ನಾಲಪು ಚಟುಪಲ್ಲಿ ಗ್ರಾಮದ ನಿವಾಸಿ.

ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿರುವ ಅರುಣ್, ಸರಳ ನಗು ಮತ್ತು ಸಹಜ ವರ್ತನೆಯಿಂದಲೇ ಲಕ್ಷಾಂತರ ಜನರ ಗಮನ ಸೆಳೆದಿದ್ದಾರೆ. ಲಾರಿಯಲ್ಲಿ ಕೆಲಸ ಮಾಡುವ ವೇಳೆ ಚಾಲಕ ನೆಹರು (ಅರುಣ್ ಪ್ರೀತಿಯಿಂದ ‘ಬಾವ’ ಎಂದು ಕರೆಯುವವರು) ಚಹಾ ಕುಡಿಯುವ ಸಂದರ್ಭದ ಹಾಸ್ಯಭರಿತ ಸಂಭಾಷಣೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೇ ವಿಡಿಯೋ ವೈರಲ್ ಆಗಲು ಕಾರಣವಾಯಿತು.

ಬಡ ಕುಟುಂಬ ಹಿನ್ನೆಲೆಯ ಅರುಣ್, ಆರ್ಥಿಕ ಸಮಸ್ಯೆಗಳ ಕಾರಣದಿಂದ ನಾಲ್ಕನೇ ತರಗತಿಗೇ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ಆದರೆ ನೆಹರು ಅವರ ಪ್ರೋತ್ಸಾಹದಿಂದ ಇತ್ತೀಚೆಗೆ 10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಲಾರಿ ಚಾಲನೆಯನ್ನೂ ಕಲಿಯುತ್ತಿದ್ದಾರೆ.

ಒಂದೂವರೆ ತಿಂಗಳ ಅವಧಿಯಲ್ಲಿ ಈ ವಿಡಿಯೋ ಸುಮಾರು ನಾಲ್ಕು ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅರುಣ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಆಗಿದ್ದಾರೆ. ಸಾಮಾನ್ಯ ಕಾರ್ಮಿಕನೊಬ್ಬ ದೇಶಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ನಿಜಕ್ಕೂ ಪ್ರೇರಣಾದಾಯಕ ಸಂಗತಿಯಾಗಿದೆ.