🔴LOCAL EXPRESS :”ಶಹಾಪುರ| ವಾಲ್ಮೀಕಿ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ವಾಲ್ಮೀಕಿ ನಾಯಕ ಸಂಘದ ಯುವ ಘಟಕ ವತಿಯಿಂದ  ವಿಶೇಷ ಪೂಜೆ”

By admin

  LOCAL EXPRESS :“ಶಹಾಪುರ| ವಾಲ್ಮೀಕಿ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ವಾಲ್ಮೀಕಿ ನಾಯಕ ಸಂಘದ ಯುವ ಘಟಕ ವತಿಯಿಂದ  ವಿಶೇಷ ಪೂಜೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಶಹಾಪುರ :

ಇಲ್ಲಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪರಮಪೂಜ್ಯ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಅವರಿಗೆ ಲಘು ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ, ಅವರ ಶೀಘ್ರ ಗುಣಮುಖತೆಗೆ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಯುವ ಘಟಕದ ವತಿಯಿಂದ ಭೀಮರಾಯನಗುಡಿಯ ಬಲಭೀಮೇಶ್ವರ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ಪೂಜೆ ಜರುಗಿತು. ಸಮಾಜದ ಮುಖಂಡರು ಮತ್ತು ಭಕ್ತರು, ಶ್ರೀಗಳು ಶೀಘ್ರ ಗುಣಮುಖರಾಗಿ ಭಕ್ತರಿಗೆ ಮತ್ತೆ ಮಾರ್ಗದರ್ಶನ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಹನಮಗೌಡ ಮರಕಲ್, ತಾಲೂಕು ಅಧ್ಯಕ್ಷ ಶೇಖರ್ ದೊರೆ ಕಕ್ಕಸಗೇರಾ, ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಯುವ ಘಟಕದ ವಿಭಾಗೀಯ ಅಧ್ಯಕ್ಷ ಡಾ. ರಾಮುನಾಯಕ ಅರಳಹಳ್ಳಿ, ಜಿಲ್ಲಾಧ್ಯಕ್ಷ ದೇವುನಾಯಕ ಗಂಗನಾಳ ಸೇರಿದಂತೆ ಎಚ್.ಬಿ. ನಾಯಕ, ರಂಗನಾಥ ದೊರೆ, ರಮೇಶ ಗಾಂಜಿ, ಬಲಭೀಮ ನಾಯಕ ಯಕ್ಷಿಂತಿ, ಪಾಂಡುರಂಗ ನಾಯಕ, ಅಶೋಕ್ ನುಚ್ಚಿನ, ಸೈದಪ್ಪ ಬಣತಿಹಾಳ, ಮರೆಪ್ಪ ಮಕಾಶಿ, ವೆಂಕಟೇಶ ಬಿದರಾಣಿ, ಹಣಮಗೌಡ ಬೀರನೂರ, ಶಿವಕುಮಾರ ಮುಡಬೂಳ, ಶ್ರೀನಿವಾಸ ಹಳಿಸಗರ, ಬಸವರಾಜ ವನದುರ್ಗ, ವೆಂಕಟೇಶ ಶಾರದಹಳ್ಳಿ, ಮಹಾಂತೇಶ ಬಂಗಾರಿ, ಶರಣು ಶೆಟ್ಟಗೇರಾ, ವೆಂಕಟೇಶ ಗಂಗನಾಳ, ನಾಗರಾಜ ಟಣಕೇದಾರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಯುವ ಮುಖಂಡರು, ಸಮಾಜದ ಗಣ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಸ್ವಾಮೀಜಿಗಳ ಆರೋಗ್ಯ ಚೇತರಿಕೆಗೆ ಹಾರೈಕೆ ವ್ಯಕ್ತಪಡಿಸಿದರು.