ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಾರ್ವಜನಿಕರೇ ವೋಟ್ ಮಾಡಿ: ಜಿಲ್ಲಾಧಿಕಾರಿ ಡಾ.ಸುಶೀಲಾ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಪ್ರವಾಸಿಗರಿಂದಲೇ ವೋಟ್ ಮಾಡಿಸಿ, ಅಧಿಕ ವೋಟ್ ಪಡೆಯುವ ಪ್ರವಾಸಿ ತಾಣಕ್ಕೆ ಹೆಚ್ಚಿನ ಅನುದಾನ ನೀಡಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದರಿಂದ ಜಿಲ್ಲೆಯ ಸಾರ್ವಜನಿಕರು ಪ್ರವಾಸಿ ತಾಣಗಳ ಕುರಿತು ವೋಟ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಕೋರಿದ್ದಾರೆ.

ದೇಶದ ಪ್ರವಾಸಿ ಸ್ಥಳಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯು  ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ ಎಂಬ ನೂತನ ಯೋಜನೆ ಜಾರಿಗೆ ತಂದು ಪ್ರವಾಸಿ ತಾಣಕ್ಕೆ ವೋಟಿಂಗ್ ಪವರ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದೇಶದ ಪ್ರವಾಸೋದ್ಯಮವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲಾ ವರ್ಗದ ಪ್ರವಾಸೋಧ್ಯಮ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಪ್ರವಾಸಿಗರೇ ತಮ್ಮ ಮೆಚ್ಚಿನ ಪ್ರವಾಸಿ ತಾಣದ ಕುರಿತು ವೋಟ್ ಮಾಡಬೇಕು. ಅತೀ ಹೆಚ್ಚು ವೋಟ್ ಪಡೆದುಕೊಳ್ಳುವ ಪ್ರವಾಸಿ ತಾಣಕ್ಕೆ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ನೀಡಿ, ಸ್ಥಳದ ಅಭಿವೃದ್ಧಿ ಕೊಡುಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶದ ಎಲ್ಲಾ ರಾಜ್ಯಗಳು ಹಾಗೂ ಆಯಾ ಜಿಲ್ಲೆಯಗಳ ಪ್ರವಾಸಿ ತಾಣಗಳನ್ನು ಈ ವ್ಯಾಪ್ತಿಗೆ ಸೇರಿಸಲಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ತಮ್ಮ ಮೆಚ್ಚಿನ ತಾಣಕ್ಕೆ ವೋಟ್ ಮಾಡುವ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡಬಹುದಾಗಿದೆ. ಆಗಸ್ಟ್ 5 ರಂದು ಇದು ಚಾಲ್ತಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಒಬ್ಬರಿಂದ ಜಿಲ್ಲೆಯ 3 ಸ್ಥಳಗಳಿಗೆ ವೋಟಿಂಗ್ ಪವರ್ : ಈ ವೋಟ್ ಮಾಡುವಾಗ ಒಬ್ಬ ಪ್ರವಾಸಿಗ ಅಥವಾ ಸಾರ್ವಜನಿಕ ಕನಿಷ್ಠ 1 ರಿಂದ ಗರಿಷ್ಠ 3 ಸ್ಥಳದ ತನಕ ವೋಟ್ ಮಾಡಲು ಅವಕಾಶವಿದೆ. ಈ ವೇಳೆ ಲಿಂಕ್‌ನಲ್ಲಿ ತಮ್ಮ ಮೊಬೈಲ್ ನಂಬರ್, ಹೆಸರು, ವಯಸ್ಸು ಸೇರಿದಂತೆ ಪ್ರಾಥಮಿಕ ಮಾಹಿತಿ ಪೂರ್ತಿ ಮಾಡಿ, ದೇಶದ ಯಾವುದೇ ಪ್ರವಾಸಿ ಸ್ಥಳದ ಕುರಿತು ವೋಟ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ಪ್ರವಾಸಿಗರು ಹಾಗೂ ಸಾರ್ವಜನಿಕರಿಂದ ಆಗಮಿಸುವ ವೋಟ್ ಲೆಕ್ಕಾಚಾರದ ಆಧಾರದ ಮೇಲೆ ಕೇಂದ್ರ ಸರಕಾರ ಆ ಸ್ಥಳದ ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಿದೆ.

ಪ್ರಮಾಣ ಪತ್ರ: ಈ ವೋಟಿಂಗ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಕೇಂದ್ರ ಸರಕಾರವೂ ಅವರ ಹೆಸರಿನಲ್ಲಿ ಪ್ರಮಾಣ ಪತ್ರ ನೀಡಲಿದೆ.

ಜಿಲ್ಲೆಯ ಸಾರ್ವಜನಿಕರು  ವೋಟ್ ಮಾಡಿ ವೆಬ್ ಲಿಂಕ್ ಬಳಸಿಕೊಂಡು ಜಿಲ್ಲೆಯ ಪ್ರವಾಸಿ ತಾಣದ ಕುರಿತು ವೋಟ್ ಮಾಡಬಹುದಾಗಿದೆ. https://innovateindia.mygov.in/ deskho-apna-desh/login/ ಲಿಂಕ್ ಬಳಿಸಿ ಜಿಲ್ಲೆಯ ನಿಮ್ಮ ಮೆಚ್ಚಿನ ಪ್ರವಾಸಿ ತಾಣದ ಕುರಿತು ವೋಟ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳು : ಯಾದಗಿರಿ ನಗರದಲ್ಲಿನ ಕೋಟೆ,   ಬೋನ್ಹಾಳ ಪಕ್ಷಿಧಾಮ, ಸಂಗಮ ( ಕೃಷ್ಣ ಮತ್ತು ಭೀಮಾನದಿಗಳ ಸಂಗಮ),  ಲುಂಬಿನಿ ವನ,  ಗುರುಮಠಕಲ್  ದಬ್‌ದಬಿ ಜಲಪಾತ, ಹತ್ತಿಕುಣಿ ಜಲಾಶಯ, ಚಿಂತನಹಳ್ಳಿ ಗವಿಸಿದ್ದಲಿಂಗೇಶ್ವರ,  ರಾಜನಕೋಳೂರು ಬುಡ್ಡರ ಮನೆಗಳು, ರಾಜಾ ವೆಂಕಟಪ್ಪ ನಾಯಕ ಕೋಟೆ ಮತ್ತು ಅರಮನೆ,  ಬಸವಸಾಗರ ಜಲಾಶಯ, ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನ, ತಿಂಥಣಿ ಮೌನೇಶ್ವರ ದೇವಸ್ಥಾನ, ಶಹಾಪುರ ಬುದ್ದ ಮಲಗಿದ ಬೆಟ್ಟ,  ಭೀಮರಾಯನ ಗುಡಿ, ಶಿರವಾಳ, ಏವೂರ, ಟೇಲರ್ ಮಂಜಿಲ್,  ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಜಿಲ್ಲೆಯಲ್ಲಿ ಕಾಣಬಹುದಾಗಿದೆ.