ನೇರಡಗಂ ಶ್ರೀಗಳ ಆಶೀರ್ವಾದ ಪಡೆದ ಶಾಸಕ‌ ಕಂದಕೂರ

By admin
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಮಠ ಮಂದಿರಗಳು ಕೇವಲ ಆಧ್ಯಾತ್ಮಿಕ ತಾಣಗಳು ಮಾತ್ರವಲ್ಲದೆ ಜನ ಸಾಮಾನ್ಯರಿಗೆ ಆಸರೆಯಾಗಿವೆ. ಶ್ರೀಮಠದ ಪೀಠಾಧೀಪತಿ ಸಿದ್ಧಲಿಂಗ ಶ್ರೀಗಳ ಸಮಾಜಮುಖಿ ಕಾರ್ಯಗಳು ಯುವಕರಿಗೆ ಮಾದರಿಯಾಗಿವೆ ಎಂದು ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ ಅವರು ಅಭಿಪ್ರಾಯ ಪಟ್ಟರು.
ಸಮೀಪದ ನೇರಡಗಂ ಶ್ರೀಮಠದಲ್ಲಿ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳವರ ಜನ್ಮದಿನದ ನಿಮಿತ್ತ ಅವರಿಗೆ ಶುಭ ಕೋರಿ ಮಾತನಾಡಿದರು.
ಕರ್ನಾಟಕ ತೆಲಂಗಾಣ ಉಭಯ ರಾಜ್ಯಗಳ ಗಡಿಯಲ್ಲಿ ಇರುವ ನೇರಡಗಂ ಶ್ರೀ ಮಠವು ಎರಡೂ ರಾಜ್ಯಗಳ ಭಕ್ತರ ಆಧ್ಯಾತ್ಮಿಕ ತಾಣವಾಗಿದೆ. ನಾನು ಪ್ರತಿ ವರ್ಷ ಶ್ರೀಗಳ ಹುಟ್ಟುಹಬ್ಬ ಹಾಗೂ ಜಾತ್ರಾ ಸಂದರ್ಭದಲ್ಲಿ ಆಶೀರ್ವಾದ ಪಡೆಯಲು ಶ್ರೀಮಠಕ್ಕೆ ಬರುತ್ತೇನೆ ಪೂಜ್ಯರು ನಮಗೆ ಉತ್ತಮ ಮಾರ್ಗದರ್ಶನದ ಜತೆಗೆ ಅಗತ್ಯ ಸಲಹೆ ಸೂಚನೆ ನೀಡುತ್ತ ಬಂದಿದ್ದಾರೆ ಎಂದರು.
ಸಿದ್ಧಲಿಂಗ ಶ್ರೀಗಳು ಅತ್ಯಂತ ಕ್ರಿಯಾಶೀಲರಾಗಿದ್ದು ಮಠದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಪೂಜ್ಯರ ಪ್ರಗತಿಪರ ಹಾಗೂ ಸಮಾಜಮುಖಿ ಚಿಂತನೆಗಳು ನಮ್ಮಂತವರಿಗೆ ಅನುಕರಣೀಯವಾಗಿವೆ ಎಂದು ಹೇಳಿದರು.
ಶ್ರೀಮಠದಲ್ಲಿ ಮಕ್ಕಳಿಗೆ ಶಿಕ್ಷಣ, ಗೋ ಸಂರಕ್ಷಣೆ, ಅಸಹಾಯಕ ಮಕ್ಕಳ ಆರೈಕೆ, ಪುರಾಣ ಪ್ರವಚನ, ಸಾಮೂಹಿಕ ವಿವಾಹ, ಅರೋಗ್ಯ, ರಕ್ತದಾನ ಶಿಬಿರ ಮುಂತಾದ ಸೇವಾ ಕಾರ್ಯಗಳು ನಮಗೆ ಸ್ಫೂರ್ತಿಯಾಗಿವೆ ಎಂದರು.
ಈ ವೇಳೆ ಗುರುಮಠಕಲ್ ಖಾಸ ಮಠದ ಶಾಂತವೀರ ಗುರು ಮುರುಘ ರಾಜೇಂದ್ರ ಮಹಾಸ್ವಾಮಿಗಳು, ಶಹಾಪುರದ ಗುರುಪಾದ ಸ್ವಾಮಿಗಳು, ಕಲ್ಲೂರಿನ ಶಂಭುಲಿAಗ ಮಹಾಸ್ವಾಮಿಗಳು, ಹೊಸಪೇಟೆಯ ಕೆಂಪಿನ ಮಠದ ಸಿದ್ಧಲಿಂಗ ಶ್ರೀಗಳು ಸೇರಿದಂತೆ ಮುಖಾಂಡರಾದ ಅಜಯರೆಡ್ಡಿ ಯಲ್ಹೇರಿ, ಶಿವರಾಜ್ ಪಾಟೀಲ್ ಗುರ್ಜಾಲ, ರಾಜೇಶ ಉಡುಪಿ, ಗುರುನಾಥರೆಡ್ಡಿ ರೋಟ್ನಡಗಿ, ನರಸಪ್ಪ ಕವಡೆ, ಯಂಕೋಬ ತುರುಕಾನದೊಡ್ಡಿ, ದೇವು ಘಂಟಿ ಬಾಡಿಯಾಳ, ಲಚಮಪ್ಪ ಕೊತ್ತ, ಮಲ್ಲುಗೌಡ, ಅಲ್ಲಾವುದ್ದಿನ್ ನೀಲಹಳ್ಳಿ, ಮೀರಾನ ಬದ್ದೇಪಲ್ಲಿ, ಗುರುನಾಥ ಯಾದವ ಸೇರಿದಂತೆ ಮುಂತಾದವರಿದ್ದರು.