ಅಟಲ್ ಜೀ ಜನ್ಮಶತಮಾನೋತ್ಸವ. ಎರಡು ತಿಂಗಳು ವಿವಿಧ ಕಾರ್ಯಕ್ರಮಗಳು: ಚಂಡ್ರಕಿ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಬಿಜೆಪಿಯಿಂದ ಬೂತ್, ಮಂಡಲ, ಜಿಲ್ಲೆ,ರಾಜ್ಯ,ರಾಷ್ಟ್ರಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳು ಜ.14ರಿಂದ ಆರಂಭವಾಗಿದ್ದು ಮಾ.15 ರವರೆಗೆ ನಡೆಯಲಿದೆ ಎಂದು ಸಮಿತಿ ಜಿಲ್ಲಾ ಪ್ರಮುಖ ಬಸವರಾಜ ಚಂಡ್ರಕಿ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಫೆ.14ರವರೆಗೆ ಅಟಲ್ ಸ್ಮೃತಿ ಸಂಕಲನ ಮತ್ತು ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ ಎಂದರು.ರಾಜ್ಯ ತಂಡದಲ್ಲಿ ಡಾ.ಎ.ಎಚ್.ಶಿವಯೋಗಿಸ್ವಾಮಿ ಹಾಗೂ ಜಗದೀಶ ಹಿರೇಮನಿ
ಅಭಿಯಾನ ಸಂಬಂಧ ಪ್ರತಿ ಜಿಲ್ಲೆಯಲ್ಲಿ ಈಗಾಗಲೇ ಒಬ್ಬರು ಹಿರಿಯರು, ಒಬ್ಬರು ಜಿಲ್ಲಾ ಪದಾಧಿಕಾರಿ ಹಾಗೂ ತಲಾ ಒಬ್ಬರಂತೆಯೇ ಮಾಧ್ಯಮ ಹಾಗೂ ಸಾಮಾಜಿಕ ಸಂಬಂಧಿಸಿದ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದರು.
ಮಂಡಲ ಮಟ್ಟದಲ್ಲಿ ಮಂಡಲ ಅಧ್ಯಕ್ಷರು, ಇಬ್ಬರು ಸದಸ್ಯರು, ಅಟಲ್ ಜೀ ಅವರಿಗೆ ಸಂಬಂಧಿಸಿದ ಪೋಟೊಗಳು, ವಿಡಿಯೋಗಳು, ಭಾಷಣಗಳು ಹಾಗೂ ಪ್ರೇರಣೀಯ ಅನುಭವಗಳ ಸಂಕಲನ ಜಿಲ್ಲಾ ಸಮಿತಿಯು ಸಂಗ್ರಹಿಸುತ್ತಿದೆ.
ಅಟಲ್ ಜೀ ಅವರೊಂದಿಗೆ ಕಾರ್ಯನಿರ್ವಹಿಸಿದ ಹಿರಿಯರಿಂದ ಮಾಹಿತಿಯನ್ನು ಸಂಗ್ರಹಿಸುವ ವೇಳೆ ಹಿರಿಯ ನಾಯಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.ಅವರ ಬಗ್ಗೆ ಬರೆದಿರುವ ಅನೇಕ ಲೇಖನಗಳು ಹಾಗೂ ಪುಸ್ತಕಗಳನ್ನು ಸಂಗ್ರಹಿಸಿ ಪಟ್ಟಿ ಮಾಡಲಾಗುತ್ತಿದೆ ಎಂದರು.
ಫೆ.15 ರಿಂದ ಮಾ.15ರವರೆಗೆ ಅಟಲ್ ವಿರಾಸತ್ ಸಮ್ಮೇಳನ ನಡೆಯಲಿವೆ.
ಅಟಲ್ ವಿರಾಸತ್ ಸಮ್ಮೇಳನ ಪ್ರತಿ ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ, ಸಮ್ಮೇಳನಕ್ಕೆ‌ ವಿಚಾರವಾದಿಗಳು, ಗಣ್ಯರನ್ನು ಆಹ್ವಾನಿಸಿ ಭಾರತ ರತ್ನ ಅಟಲಿಜೀ ಅವರೊಂದಿಗೆ ಕೆಲಸ ಮಾಎಇದ ಹಿರಿಯ ಕಾರ್ಯಕರ್ತರನ್ನು, ಇವರ ಬಗ್ಗೆ ಪುಸ್ತಕ, ಲೇಖನ ಬರೆದಿರುವ ಸನ್ಮಾನಿಸಲಾಗುತ್ತದೆ.
ಅವರ ಅಧಿಕಾರಾವಧಿಯಲ್ಲಿ ವಿಶೇಷ ಸಾಧನೆಗಳು ಮತ್ತು ಯೋಜನೆಗಳ ಮಾಹಿತಿಯುಳ್ಳ ಪಿಪಿಟಿ ಪ್ರದರ್ಶನ ನಡೆಯಲಿದೆ ಎಂದು ಅವರು ಹೇಳಿದರು.
ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಪಾಟೀಲ್, ನಗರಸಭೆ ಅಧ್ಯಕ್ಷರೂ ಆಗಿರುವ ರಾಜ್ಯ ಕಾರ್ಯದರ್ಶಿ ಕು.ಲಲಿತಾ ಅನಪುರ,ಯುವ‌ ಮುಖಂಡ ಮಹೇಶರಡ್ಡಿ ಮುದ್ನಾಳ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ,ಅಟಲ್ ಜನ್ಮ ಶತಮಾನೋತ್ಸವದ ಜಿಲ್ಲಾ ಸಂಚಾಲಕ ಮೇಲಪ್ಪ ಗುಳಗಿ,ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಮಲ್ಲು ಚಾಪಲ್,ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಇತರರಿದ್ದರು.