ಸಚಿವರು ಕೇವಲ ಶಹಾಪುರ, ಯಾದಗಿರಿಗೇ ಸಿಮಿತ.

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಶಹಾಪುರ ಮತ್ತು ಆಗಾಗ ಯಾದಗಿರಿಗೆ ಮಾತ್ರ ಸೀಮಿತರಾಗಿದ್ದಾರೆಂದು ಆರೋಪಿಸಿರುವ ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಶಹಾಪುರದಲ್ಲಿ ಅವರ ಕುಟುಂಬದ್ದೇ ಒಂದು ಸಣ್ಣ ಕ್ಯಾಬಿನೆಟ್ ಕಟ್ಟಿಕೊಂಡಿದ್ದಾರೆಂದು ಸಚಿವ ಶರಣಬಸಪ್ಪ ದರ್ಶನಾಪುರ ಹೆಸರು ಉಲ್ಲೇಖಸಿದೇ ವ್ಯಂಗ್ಯವಾಡಿದರು.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧ್ಯಕ್ಷರಾಗಿ ಪ್ರಥಮ ಭಾರಿಗೆ ಸುದ್ಧಿಗೊಷ್ಠಿ ನಡೆಸಿ ಮಾತನಾಡಿದ ಅವರು, ಆರು ತಾಲೂಕುಗಳ ದೊಡ್ಡ ಜಿಲ್ಲೆ ಇದಾಗಿದ್ದರೂ ಸಚಿವರು, ಕೇವಲ ಒಂದೆರಡು ತಾಲೂಕಿಗಳಿಗೆ ಭೇಟಿ ನೀಡುತ್ತಾರೆಯೇ ಹೊರತು ಇಲ್ಲಿಯವರೆಗೂ ಇಡಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗಾಗಲಿ, ಹೊಬಳಿ, ಹಳ್ಳಿಗಳಾಲಿ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿಲ್ಲ, ಜಿಲ್ಲೆ ಅಭಿವೃದ್ಧಿಗೆ ಕೆಲಸ ಮಾಡದ ಸಚಿವರ ಹಿಂದೆ ಭ್ರಷ್ಟಾಚಾರ ಮಾಡುವ ಒಂದು ತಂಡವೇ ಇದೆ, ಅವರ ಅಣತಿಯಂತೆಯೇ ಕೆಲಸ ಮಾಡುತ್ತಿದ್ದಾರೆಂದು ಗಂಭಿರವಾಗಿ ಆರೋಪಿಸಿದರು.
ಬರುವ ದಿನಗಳಲ್ಲಿ ಅವರು ಮಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಪಕ್ಷದಿಂದ ಹೋರಾಟ ಮಾಡಲಾಗುವುದೆಂದರು.
ಸಚಿವರ ಕುಟುಂಬಸ್ಥರೇ ಶಹಾಪುರ ಜಿಲ್ಲೆಯಲ್ಲಿ ಒಂದೊಂದು ಖಾತೆ ಸಂಬಳ್ಳಿಸುತ್ತಿದ್ದಾರೆ, ಅವರ ಕಾಕಾ ಗ್ರಾಮೀಣಾಭಿವೃದ್ಧಿ, ಅವರ ಸೊದರ ಗಣಿ ಮತ್ತು ಭೂವಿಜ್ಞಾನ, ಸಂಬಂಧಿಕರು ಲೋಕೋಪಯೋಗಿ ಹೀಗೆ ಇಡಿ ಜಿಲ್ಲೆ ತಮ್ಮ ಹಿಡಿತದಲ್ಲಿಬಿಟ್ಟು ಕೊಂಡು ಅಭಿವೃದ್ಧಿ ಶೂನ್ಯ ಮಾಡಿದ್ದಾರೆಂದು ಅಧ್ಯಕ್ಷ ವಿಭೂತಿಹಳ್ಳಿ ಆರೊಪಿಸಿದರು. ಮುಂಬರುವ ದಿನಗಳಲ್ಲಿ ಪಕ್ಷ ಬೂತ ಮಟ್ಟದಿಂದ ಸಂಘಟಿಸಿ, ಮುಂಬರುವ ಎಲ್ಲ ಚುನಾವಣೆಗಳಲ್ಲಿ ಗೆಲ್ಲುತ್ತೆವೆ ಎಂದರು. ಪಕ್ಷದ ಮುಖಂಡರು ಮತ್ತು ಜಿಲ್ಲೆಯ ಎಲ್ಲ ಪ್ರಮುಖರು ನನಗೆ ಈ ದೊಡ್ಡ ಹೊಣೆಗಾರಿಗೆ ನೀಡಿದ್ದಾರೆ. ನಾನು ಎಲ್ಲರ ಸಹಕಾರದಿಂದ ಕೆಲಸ ಮಾಡುವುದಾಗಿ ಹೇಳಿದರು
ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್ ಮಾಗನೂರ, ಅಮೀನ್ ರಡ್ಡಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಗುರು ಕಾಮಾ, ದೇವೇಂದ್ರನಾಥ ನಾದ್, ಎಚ್.ಸಿ.ಪಾಟೀಲ್, ಡಾ.ಚಂದ್ರಶೇಖರ ಸುಬೇದಾರ ಇತರರಿದ್ದರು.