🔴LOCAL EXPRESS :”ಕೊಪ್ಪಳ |ಜಿಲ್ಲಾ ಯೋಜನಾ ಸಮಿತಿ ಚುನಾವಣೆ : ಬಿಜೆಪಿಗೆ ಭರ್ಜರಿ ಜಯ.! ಕುಕನೂರು ಪ.ಪಂ. ಸದಸ್ಯ ಬಾಲರಾಜ್ ಗಾಳಿ ಸೇರಿ ನಾಲ್ವರು ಆಯ್ಕೆ”

By admin

  🔴LOCAL EXPRESS : “ಕೊಪ್ಪಳ |ಜಿಲ್ಲಾ ಯೋಜನಾ ಸಮಿತಿ ಚುನಾವಣೆ : ಬಿಜೆಪಿಗೆ ಭರ್ಜರಿ ಜಯ.!
ಕುಕನೂರು ಪ.ಪಂ. ಸದಸ್ಯ ಬಾಲರಾಜ್ ಗಾಳಿ ಸೇರಿ ನಾಲ್ವರು ಆಯ್ಕೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ: 

ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ನಾಲ್ವರು ಅಭ್ಯರ್ಥಿಗಳು ನಾಲ್ಕಕ್ಕೂ ನಾಲ್ಕು ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ.

ಕುಕನೂರು ಪಟ್ಟಣ ಪಂಚಾಯತ್‌ನ ಬಾಲರಾಜ್ ಗಾಳಿ ಸೇರಿ ನಾಲ್ವರು ಸದಸ್ಯರು ಜಿಲ್ಲಾ ಯೋಜನಾ ಸಮಿತಿಗೆ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಬಿಜೆಪಿ ಸಂಘಟನಾ ಬಲ ಮತ್ತೊಮ್ಮೆ ಸಾಬೀತಾಗಿದೆ. ವಿಜೇತರಾದ ಅಭ್ಯರ್ಥಿಗಳಲ್ಲಿ ಪರಶುರಾಮನಾಯಕ (ಭಾಗ್ಯನಗರ ಪಟ್ಟಣ ಪಂಚಾಯತ್), ಬಾಲರಾಜ್ ಗಾಳಿ (ಕುಕನೂರು ಪಟ್ಟಣ ಪಂಚಾಯತ್), ಶಿವನಗೌಡ ತಾವರಗೇರಾ (ತಾವರಗೇರಾ ಪಟ್ಟಣ ಪಂಚಾಯತ್) ಹಾಗೂ ಸೋಮಶೇಖರಪ್ಪ ಬೆರಗಿ (ಕಾರಟಗಿ ಪುರಸಭೆ) ಸೇರಿದ್ದಾರೆ.

ಈ ಗೆಲುವಿಗೆ ಪಕ್ಷದ ಶಿಸ್ತುಬದ್ಧ ಸಂಘಟನೆ, ಕಾರ್ಯಕರ್ತರ ಶ್ರಮ ಹಾಗೂ ಹಿರಿಯ ನಾಯಕರ ಮಾರ್ಗದರ್ಶನವೇ ಪ್ರಮುಖ ಕಾರಣ ಎಂದು ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟರು.

ಪಕ್ಷದ ಜಿಲ್ಲಾ ಅಧ್ಯಕ್ಷ ಬಸವರಾಜ ದಡೇಸೂಗೂರು, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಡಾ. ಕೆ. ಬಸವರಾಜ ಕ್ಯಾವಟರ್‌ ಮತ್ತು ನವೀನ ಗುಳಗಣ್ಣನವರ್‌   ಸೇರಿದಂತೆ ಅನೇಕ ಹಿರಿಯ ನಾಯಕರ ಮಾರ್ಗದರ್ಶನ ಮತ್ತು ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದು ಹೇಳಿದರು.

ಗೆಲುವಿನ ಸಂಭ್ರಮದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರನ್ನು ಬಾಲರಾಜ್ ಗಾಳಿ ಹಾಗೂ ಪಕ್ಷದ ಮುಖಂಡರು ಸನ್ಮಾನಿಸಿ ಸಿಹಿ ತಿನಿಸಿ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕರ್ತರು ಹಾಗೂ ಮುಖಂಡರು ಹರ್ಷ ವ್ಯಕ್ತಪಡಿಸಿ ಪರಸ್ಪರ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ  ಸಿದ್ದು ಉಳ್ಳಾಗಡ್ಡಿ, ಕರಿಬಸಯ್ಯ ಬಿನ್ನಾಳ, ಮಹಾಂತೇಶ ಹೂಗಾರ್, ಜಗನ್ನಾಥ್ ಬೋವಿ, ಲಕ್ಷ್ಮಣ ಕಾಳಿ, ಬಸವರಾಜ್ ಹಾಳ್ಕೇರಿ, ವೀರೇಶ್ ಶಬ್ರಾದ್, ನಾಗರಾಜ್ ನಿಕ್ಕಮ್, ಮಂಜುನಾಥ್ ಮಾಲಗಿತ್ತಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.