ಕಿ
ಅಳುತ್ತ ನಿರಾಶೆದಿ ಸಂಪತಿ ತನ್ನಗಾಥೆ ಮುಂದುವರೆಸುತI
ನುಡಿದ: ” ಧ್ಯಾನದನಂತರ ನಿಶಾಕರ ಮುನಿ ನಡಿದ: II
ಹೊಸ ಪಕ್ಕಗಳು ಬೆಳೆಯುವವು ನಿನಗೆ,I
ಶೌರ್ಯ ಸಾಹಸಗಳು ಮರಳುವವು ನಿನಗೆ’; ಮುನಿಯ ಸಾಂತ್ವನ II
ನುಡಿ ಕೇಳಿ ನನಗೆ,ಭರವಸೆ ಹುಟ್ಟಿತು, ಹಿಂದೆ ಕೇಳಿದ ಸತ್ಯಗಳ ಬಗ್ಗೆ ನನಗೆ; I
ದಶರಥಪುತ್ರ ರಾಮನು ಪತ್ನಿ ಸೀತೆ ಅರಿಸುತ II
ಬರುವನಿಲ್ಲಿ,ಸಮುದ್ರ ದಾಟುವ ವಾನರಿಗೆ ಲಂಕೆಗೆ ಹಾರಲು ಹೇಳು; I
ಸೀತೆ ರಾವಣನ ಬಂಧನದಲ್ಲಿರುವಳು, II
ರಾಮನ ನೆನಪಿನಲಿ ಜಲಸೇವಿಸುತ ದಿನರಾತ್ರಿ ಕಳೆಯುತಿಹಳು; I
ಸಂಪತಿ, ನಿನ್ನ ಪಕ್ಕಗಳು ದುರ್ಬಲಾಗಿವೆ II
ಸುಮುದ್ರ ದಾಚೆ ಹಾರಬೇಡಾ, ಸೀತೆ ವಿಷಯ ತಿಳಿಸು ವಾನರರಿಗೆ;I
ಔಷಧೋಪಚಾರದಿ ಕೊಡುವೆ ಹೊಸ ಪಕ್ಕಗಳ II
ನಿನಗೆ,ರಾಮ ಲಕ್ಷ್ಮಣರ ನೋಡುವ ಬಯಕೆ, I
ಆದರೆ ಆಯುಷ್ಯವಿಲ್ಲೆನಗೆ’ ಹೇಳಿ ಹೀಗೆ ನಿಶಾಕರ II
ಮುನಿ ತನ್ನ ಆಶ್ರಮದಲಿ ಹೋದ; ವಿಂಧ್ಯಪರ್ವತದI
ಶಿಖರ ಗವಿ ಸೇರಿದೆ ನಾ ತೆವಳುತ”.II
ಕಿಷ್ಕಿಂಧಕಾಂಡ ರಾಮಾಯಣ
ಹಾಗೆಯೇ ಅಳುತ್ತ ನಿರಾಶೆಯಿಂದ ಸಂಪತಿಯು ತನ್ನಗಾಥೆಯನ್ನು ವಾನರರಿಗೆ ಮುಂದುವರೆಸಿದನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು “ತನ್ನ ಧ್ಯಾನದ ನಂತರ ನಿಶಾಕರ ಮುನಿ ನನಗೆ ‘ಹೊಸ ಪಕ್ಕಗಳು ಬೆಳೆಯುವವು, ಶೌರ್ಯ ಸಾಹಸಗಳು ಮರಳುವವು ಎಂದು ಹೇಳಿದರು, ಮುನಿಯ ಸ್ವಾಂತನ ಮಾತುಗಳನ್ನು ಕೇಳಿ ನನಗೆ ಭರವಸೆ ಹುಟ್ಟಿತು ಅದರಂತೆ ಮುನಿಗಳು ತಾವು ಹಿಂದೆ ಕೇಳಿದ ಸತ್ಯಗಳ ಬಗ್ಗೆ ನನಗೆ ವಿವರಿಸಿದರು— ಮುಂದೊಂದು ದಿನ ದಶರಥಪುತ್ರ ರಾಮನು ತನ್ನ ಪತ್ನಿ ಸೀತೆಯನ್ನು ಹುಡುಕುತ ಇಲ್ಲಿಗೆ ಬರುವನು; ನೀನು ವಾನರರಿಗೆ ಹಾರಿ ಸಮುದ್ರ ದಾಟಿ ಲಂಕೆಗೆ ಹೋಗಲು ಹೇಳು; ಈಗ ಸೀತೆಯು ರಾವಣನ ಬಂಧನದಲ್ಲಿರುವಳು ಹಾಗು ಅವಳು ರಾಮನ ನೆನಪಿನಲಿ ಜಲ ಸೇವಿಸುತ್ತ ದಿನರಾತ್ರಿ ಕಳೆಯುತ್ತಿರುವಳು; ಸಂಪತಿ, ನಿನ್ನ ಪಕ್ಕಗಳು ದುರ್ಬಲಾಗಿವೆ ನೀನು ಸುಮುದ್ರ ದಾಚೆ ಹಾರಬೇಡಾ, ಕೆವಲ ವಾನರರಿಗೆ ಸೀತೆ ವಿಷಯ ತಿಳಿಸು; ನನ್ನ ಔಷಧೋಪಚಾರದಿಂದ ನಿನಗೆ ಹೊಸ ಪಕ್ಕಗಳನ್ನು ತಂದುಕೊಡುವೆ; ನನಗೂ ರಾಮ ಲಕ್ಷ್ಮಣರನ್ನು ನೋಡುವ ಬಯಕೆ ಆದರೆ ನನಗೆ ಆಯುಷ್ಯ ಇಲ್ಲ(ಅವರು ಬರುವ ತನಕ ನಾನು ಬದುಕಲಾರೆನು); ಹೀಗೆ ನಿಶಾಕರ ಮುನಿಯು ನನಗೆ ಹೇಳುತ ತನ್ನ ಆಶ್ರಮದಲ್ಲಿ ಹೋದನು ಹಾಗು ನಾನು ತೆವಳುತ ವಿಂಧ್ಯಪರ್ವತದ ಶಿಖರ ಗವಿ ಸೇರಿದೆನು” ಎಂದು ನಿಶಾಕರ ಮುನಿ ತನಗೆ ಹೇಳಿದ ಮಾತುಗಳನ್ನು ಹೇಳಿದನು. ನಿಶಾಕರ ಮುನಿಯಿಂದ ರಾಮ ಅಲ್ಲಿಗೆ ಬರುವ ಘಟನೆಯ ಭವಿಷ್ಯವಾಣಿ ನುಡಿಯಿಂದ (1) ಭೂತಕಾಲ ಮತ್ತು ವರ್ತಮಾನಕಾಲ ಘಟನೆಗಳ ಅನುಭವದ ಮೇಲೆ ಭವಿಷ್ಯದ ಘಟನೆಗಳನ್ನು ಊಹಿಸುವ ಕಲೆ-ವಿಜ್ಞಾನ ಮತ್ತು (2) ಔಷಧೋಪಚಾರದಿಂದ ಗುಣಮುಖ ಪಡಿಸುವ ವಿಜ್ಞಾನಗಳ ತರ್ಕ ಮತ್ತು ಪ್ರಾಮಾಣ್ಯಗಳ ಆಯಾಮಗಳನ್ನು ಅದಿಕವಿ ವಾಲ್ಮೀಕಿ ಈ ಸಂದರ್ಭದಲ್ಲಿ ಪ್ರತಿಪಾದಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
