
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
2024 ಘೋಷವಾಕ್ಯಾ “ರೇಬಿಸ್ ಗಡಿಗಳನ್ನು ಮೀರಿ ಮುಂದುವರಿಯೋಣ” ಎಂದು ಇರುತ್ತದೆ, ಯಾವುದೆ ಪ್ರಾಣಿ ಕಡಿತಕ್ಕೆ ಒಳಗಾದರೆ ನಿರ್ಲಕ್ಷಿಸಬೇಡಿ. ಸಾಬೂನನ್ನು ಬಳಸಿ 15 ನಿಮಿಷಗಳ ಕಾಲ ಗಾಯವನ್ನು ನಿರಂತರವಾಗಿ ನೀರಿನಿಂದ ತೊಳೆಯಿರಿ. ರೇಬಿಸ್ ನಿರೋಧಕ ಚುಚ್ಚುಮದ್ದು ಮತ್ತು ಇಮ್ಯೂನೋಗ್ಲೋಬಲಿನ್ ವೈದ್ಯರ ಸಲಹೆಯಂತೆ ಪೂರ್ಣಗೊಳಸಬೇಕು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಮ್.ಎಸ್ ಪಾಟೀಲ್ ಅವರು ಸಲಹೆ ನೀಡಿದರು.
ರೇಬಿಸ್ ಒಂದು ಭೀಕರ ಮಾರಣಾಂತಿಕ ಕಾಯಿಲೆಯಾಗಿದ್ದು ವಿಶ್ವಾದ್ಯಂತ ರೇಬಿಸ್ಗೆ ಪ್ರತಿ 15 ನಿಮಿಶಕ್ಕ 1 ಸಾವು ಸಂಭವಿಸುತ್ತಿದೆ. 99% ಜನರಿಗೆ ನಾಯಿ ಕಡಿತದಿಂದ ರೇಬಿಸ್ ಬರುತ್ತದೆ. ಎಚ್ಚರ ರೇಬಿಸ್ನಿಂದ ಸಾಯುತ್ತಿರುª 10 ಮಂದಿ ಪೈಕಿ 4À ಜನ ಮಕ್ಕಳೆ ಆಗಿರುತ್ತಾರೆ. ಪ್ರಾಣಿಗಳು ಕಚ್ಚಿದಾಗ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಲಸಿಕಾ ವೇಳಾಪಟ್ಟಿಯಂತೆ ಪಡೆಯಿರಿ. ನಾಯಿ, ಪ್ರಾಣಿಗಳು ಕಚ್ಚಿದ ತಕ್ಷಣ ನಿಮ್ಮ ಹತ್ತಿರದ ಆಸ್ಪತ್ರೆ, ಆಂಟಿ ರೇಬಿಸ್ ಕ್ಲಿನಿಕ್ಗೆ ಭೇಟಿ ನೀಡಿರಿ. ಗಾಯಕ್ಕೆ ತಕ್ಷಣ ಯಾವುದಾದರು (ಲಭ್ಯವಿದ್ದಲ್ಲಿ)ಸೋಂಕು ನಿವಾರಕ ಮುಲಾಮು ಹಚ್ಚಿರಿ. ಪ್ರಾಣಿ ಕಚ್ಚಿದ ಗಾಯಕ್ಕೆ ಮಣ್ಣು, ಸಗಣಿ, ಕಾಫಿ ,ಪೌಡರ್ ,ಸಾಸಿವೆ ಎಣ್ಣೆ, ಮುಂತಾದ ವಸ್ತುಗಳನ್ನು ಹಚ್ಚಬೇಡಿ ಎಂದು ಹೇಳಿದರು.
ಪ್ರಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಜಿಲ್ಲಾ ಎಪಿಡೊಮೊಲೊಜಿಸ್ಟ ಡಾ.ಸುನಿತಾ ನಿನ್ನೆಕರ್ ಅವರು ನೆರವೇರಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿ ತುಳಸಿರಾಮ ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಮೆಲ್ವಿಚಾರಣಾ ಅಧಿಕಾರಿಗಳು ಶಾಂತಿಲಾಲ್ ಜಿಲ್ಲಾ ವಂದನಾರ್ಪಣೆ ನೆರವೇರಿಸಿದರು.
