LOCAL EXPRESS: “ಕೊಪ್ಫಳ| ಹೆಬ್ಬಾವು ಕೋತಿಗೆ ಬಿಗಿಯಾಗಿ ಸುತ್ತಿಕೊಂಡ ಪರಿಣಾಮ :ಉಸಿರುಗಟ್ಟಿ ಜೀವ ಬಿಟ್ಟ ಕೋತಿ”  

By admin

“ಕೊಪ್ಫಳ|  ಹೆಬ್ಬಾವು ಕೋತಿಗೆ ಬಿಗಿಯಾಗಿ ಸುತ್ತಿಕೊಂಡ ಪರಿಣಾಮ : ಉಸಿರುಗಟ್ಟಿ ಜೀವ ಬಿಟ್ಟ ಕೋತಿ”  

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ :

ತಾಲ್ಲೂಕಿನ ಬಸಾಪುರ ಸೀಮಾದ ವಿಜಯನಗರ ಎಡದಂಡೆ ಕಾಲುವೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ದಡದಲ್ಲಿದ್ದ ಕೋತಿ ಮೇಲೆ ದಾಳಿ ಮಾಡಿ ಬಿಗಿಯಾಗಿ ಹಿಡಿದಿದ್ದ ಘಟನೆ ಜರುಗಿದೆ. ಅದರ ಸುತ್ತಲೂ ಹುಲ್ಲು, ಜಾಲಿಗಿಡಗಳು ಬೆಳೆದಿವೆ ಇದರಲ್ಲಿ ಅಡಗಿದ್ದ ಹೆಬ್ಬಾವು ಕೋತಿಯ ಮೇಲೆ ದಾಳಿ ನಡೆಸಿ ಅದನ್ನು ತನ್ನ ದೇಹದಲ್ಲಿ ಸುತ್ತಿಕೊಂಡಿತ್ತು.

ದನಕರು-ಎಮ್ಮೆ ಮೈತೊಳೆಯಲು ಹೋದ ಯುವಕ ಮುದಿಯಪ್ಪ ಮೇಕಾಳಿ ಎನ್ನುವವನು ಹೆಬ್ಬಾವು ಕಂಡು ಆತಂಕಗೊಂಡಿದ್ದಾನೆ. ಮುದಿಯಪ್ಪ ತನ್ನ ಸ್ನೇಹಿತರನ್ನು ಕರೆದು ತೋರಿಸಿದಾಗ ಕೋತಿಯನ್ನು ತನ್ನ ದೇಹದಲ್ಲಿ ಹೆಬ್ಬಾವು ಬೀಗಿದು ಸುತ್ತಿಕೊಂಡಿದ್ದು ಉಸಿರಾಡಲು ಪರದಾಡುತ್ತಿದ್ದ ಕೋತಿಯು ಕೊನೆಗೂ ಪ್ರಾಣ ಹೋಯಿತು. ಈ ದೃಶ್ಯ ಸ್ಥಳೀಯ ಜನ ಮೊಬೈಲ್‌ನಲ್ಲಿ ಸೆರೆಹಿಡಿದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಳಿಕ  ಕಟ್ಟಿಗೆಯಿಂದ ಹೆಬ್ಬಾವುನ್ನು ಮೇಲೆತ್ತಲು ಮುದಿಯಪ್ಪ ಹಾಗೂ ಸ್ನೇಹಿತರು ಪ್ರಯತ್ನಿಸಿದಾಗ ಕೋತಿಯನ್ನು ಬಿಟ್ಟು ಹೆಬ್ಬಾವು ಕಾಣೆಯಾಗಿದೆ ಎಂದು ಸ್ಥಳೀಯ ಯುವಕರು ಮಾಹಿತಿ ನೀಡಿದ್ದಾರೆ.

ಇದೇ ಹೆಬ್ಬಾವು ನಿನ್ನೆ ರಾತ್ರಿ ಮತ್ತೆ ಅದೇ ಭಾಗದಲ್ಲಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಉಂಟುಮಾಡಿತು. ತುಂಗಭದ್ರ ಎಡದಂಡೆ ಕಾಲುವೆಯ ಬಳಿ ಅಡಗಿದ್ದ ಹೆಬ್ಬಾವನ್ನು ಜನ ಹಿಡಿದು ಸುರಕ್ಷಿತವಾಗಿ ಅರಣ್ಯ ಭಾಗದಲ್ಲಿ ಬಿಟ್ಟಿದ್ದಾರೆ ಮಾಹಿತಿ  ತಿಳಿದು ಬಂದಿದೆ.