ಶ್ರೀ ಸಿದ್ಧೇಶ್ವರ ಶ್ರೀಗಳ ಕುರಿತ ಕಾವ್ಯ(ನುಡಿ ಮುತ್ತಿನ ದೇವರು)

By admin

ನುಡಿ ಮುತ್ತಿನ ದೇವರು

ಗೌಡಪ್ಪಗೌಡ ಹುಲ್ಕಲ್.ಕೆ.
***************

ಸಾಧು ಆಗಲಿಲ್ಲ
ಸಾಧನೆ ಬಿಡಲಿಲ್ಲ

ಕಾವಿ ಹಾಕಲಿಲ್ಲ
ಕಾಯಕ ಬಿಡಲಿಲ್ಲ

ಜಾತಿ ಮಾಡಲಿಲ್ಲ
ಜಗದ ಜನರ
ಪ್ರೀತಿ ಮರೆಲಿಲ್ಲ

ಆಡಂಬರ ಬಯಸಲಿಲ್ಲ
ಸರಳತೆ ಬಿಡಲಿಲ್ಲ

ಪಾದ ಯಾರಿಗೆ ಕೊಡಲಿಲ್ಲ
ಅಡ್ಡ ಪಲ್ಲಕ್ಕಿ ಉತ್ಸವ ಬೇಡಲಿಲ್ಲ

ಐಷಾರಾಮಿ ಕಾರು ಕೇಳಲಿಲ್ಲ
ಐಷಾರಾಮಿ ಜೀವನ ನಡೆಸಲಿಲ್ಲ

ನಾನು ದೇವರು ಅನ್ನಲಿಲ್ಲ
ಸುಖದ ಸುಪ್ಪತ್ತಿಗೆ ಮೇಲೆ
ಮಲಗಲು ಬಯಸಲಿಲ್ಲ

ಪದ್ಮಶ್ರೀ ಪ್ರಶಸ್ತಿ ಬಂದರೂ
ಸ್ವೀಕಾರ ಮಾಡಲಿಲ್ಲ
ಜ್ಞಾನದ ಹಾದಿ ಬಿಡಲಿಲ್ಲ

ಆಡಂಬರದ ಮಠ ಕಟ್ಟಲಿಲ್ಲ
ಭಕ್ತರಿಗೆ ಜ್ಞಾನ ಕೊಡುವುದು ಮರೆಯಲಿಲ್ಲ

ಇವರು ನನ್ನ ಭಕ್ತರು ಅನ್ನಲಿಲ್ಲ
ನಾವು ನೀವು ಎಲ್ಲರೂ
ಪರಮಾತ್ಮನ ಭಕ್ತರು
ಅನ್ನುವ ಮಾತು ಮರೆಯಲಿಲ್ಲ

ಕೋಟಿ ಕೋಟಿ ಬಯಸಲಿಲ್ಲ
ಕೋಟಿ ಭಕ್ತರ ಹೃದಯದಲ್ಲಿ
ಬೆಳಕು ನೀಡಿ ಹೋದರಲ್ಲ

ಸಿದ್ದೇಶ್ವರ ಅಪ್ಪನವರು
ಎಲ್ಲರ ಹೃದಯದಲ್ಲಿ
ಬೇವು ಬೆಲ್ಲ

ಸಿದ್ದೇಶ್ವರ ಅಪ್ಪನವರ ಅಗಲಿಕೆಗೆ
ಇಡೀ ವಿಶ್ವವ ಜನರು
ಅನಾಥರಂತೆ ಕಣ್ಣೀರು ಸುರಿಸರಲ್ಲ
————–