ಮುಡಬೂಳದಲ್ಲಿ ಗಣಿತ ಕಲಿಕಾ ಆಂದೋಲನ ಅಭಿಯಾನ

ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ: ಮುಡಬೂಳ ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಗಣಿತ ಕಲಿಕಾ ಆಂದೋಲನ”ಅಭಿಯಾನದ ಕಾರ್ಯಕ್ರಮವನ್ನು ಪ್ರಯುಕ್ತ ವಾಗಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಶ್ರೀ ನಾಗಪ್ಪ ಮಾತನಾಡಿ, ಗ್ರಾಮೀಣ ಮಟ್ಟದ ವಿಧ್ಯಾರ್ಥಿಗಳಿಗೆ ಗಣಿತ ವಿಷಯವನ್ನು ಮಕ್ಕಳಿಂದ ಗುರುತಿಸಿ ಅವರಿಂದ ಉತ್ತರವನ್ನು ಕೊಡುವಂತೆ ಮಾಡುವ ಸರಳವಾದ ರೀತಿಯಲ್ಲಿ ಮಕ್ಕಳಿಗೆ ಕಲಿಸಿಕೊಡವುದರಿಂದ ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೆಳಿದರು.
ಶಾಲೆಯ ಮುಖ್ಯ ಗುರುಗಳಾದ ಶ್ರೀ C S ಹಾವರೀಗಿ ಮಾತನಾಡಿ, ಗಣಿತ ಕಲಿಕಾ ಆಂದೋಲನದ ಮುಖ್ಯ ಗುರಿ ಮತ್ತು ಉದ್ದೇಶಗಳು ಕುರಿತು ಮಕ್ಕಳಿಗೆ ಅಂಕಿ-ಸಂಖ್ಯೆ ಗಳು ಹಾಗೂ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಕಾರ ಮೂಲಕ ಮಕ್ಕಳ ಬುದ್ಧಿಶಕ್ತಿ ರೂಪಗೊಳ್ಳುತ್ತದೆ ಎಂದರು.
ಗ್ರಾಮ ಪಂಚಾಯಿತ ಗ್ರಂಥಾಲಯ ಮೇಲ್ವಿಚಾರಕರಾದ ದೇವುನಾಯಕ ಮುಡಬೂಳ ಮಾತನಾಡಿ, ಗ್ರಾಮೀಣ ಮಟ್ಟದ ಮಕ್ಕಳಿಗೆ ಅಕ್ಷರದ ಗಣಿತ ಮಾದರಿ ಸಂಯೋಜಿತ, ೧-೫ ರವರೆಗೆ ಮಕ್ಕಳಿಗೆ ಪ್ರಾವೀಣ್ಯತೆಯನ್ನು ಹೆಚ್ಚಿಸಲು ಸರಕಾರದ ಯೋಜನೆ ಹಾಗೂ ಶಿಕ್ಷಣದ ಮೌಲ್ಯವನ್ನು ಬೇಳುಸುವಲ್ಲಿ ಶಿಕ್ಷಕರ ಕೆಲಸ ಪ್ರಾಮುಖ್ಯತೆ ಪಡೆದಿದೆ ಎಂದು ತಿಳಿಸಿದರು.
ಈ ಗಣಿತ ಕಲಿಕಾ ಆಂದೋಲನ ನಿಯೋಜಿತವಾಗಿ ಮುಡಬೂಳ, ಸಲ್ದಾಪೂರ ಅರಳ್ಳಳ್ಳಿ ಗ್ರಾಮದ ಸರಕಾರಿ , ಉರ್ದು, ಮತ್ತು ಅಂಬೇಡ್ಕರ್ ಶಾಲೆಯ 4ನೇ,5ನೇ ಹಾಗೂ 6ನೇ ತರಗತಿ ಮಕ್ಕಳಿಗೆ ಗಣಿತ ವಿಷಯದ ಬಗ್ಗೆ ಪರೀಕ್ಷಾ ನಡೆಸಲಾಯಿತು.
ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ಅಭಿನಂದನ ಪ್ರಮಾಣ ಪತ್ರ ಹಾಗೂ ಶಿಸ್ತುಬದ್ಧವಾಗಿ ನಡಿಸಿಕೊಟ್ಟ ಶಿಕ್ಷಕರಿಗೂ ಪ್ರಶಂಸೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗ್ರಾಮ ಸದಸ್ಯರಾದ ಶ್ರೀ ವಿಶ್ವರಾಧ್ಯ ದೇಸಾಯಿ, ಶ್ರೀ ನಿಂಗಣ್ಣ ಹವಲ್ದಾರ ಶಾಲೆಯ SDMC ಸದಸ್ಯರಾದ ಅಯ್ಯಾಣ್ಣ ಗುಂಚಪಲ್ಲಿ, ಅಂಬೇಡ್ಕರ್ ಶಾಲೆಯ ಮುಖ್ಯ ಗುರುಗಳಾದ ಶ್ರೀಶೈಲ,ಉರ್ದು ಶಾಲೆಯ ಶಿಕ್ಷಕಿಯಾರದ ಗೌನಿಯಾ, ಸುಮಯ್ಯಾ,ಶಾಂತಲ ಮತ್ತು ಗ್ರಾಮ ಪಂಚಾಯತಿ ಬಿಲ್ಲಕಲೆಕ್ಟರ್ ರಾದ ಸಾಹೇಬಗೌಡ, ಹಣಮಂತ ಗಡಂಗ ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಮತ್ತು ಊರಿನ ಪ್ರಮುಖ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ನಿರೂಪಣೆ ಶಿಕ್ಷಕರಾದ ಶ್ರೀ ಬಂದೇನವಾಜ, ಸ್ವಾಗತ ಶ್ರೀ ಮತಿ ಶಾಂತಮ್ಮ ,ವಂದನಾ ಅರ್ಪಣೆ ತಿಮ್ಮಯ್ಯ ಮಾಡಿದರು.
